Don't Miss!
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Automobiles ಓಲಾ ಎಸ್ 1 ಪ್ರೋ VS ಏಥರ್ 450X: ಮದಗಜಗಳ ಹಣಾಹಣಿಯಲ್ಲಿ ಯಾರು ಬೆಸ್ಟ್?
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೈದರಾಬಾದ್ ಕರ್ನಾಟಕದಲ್ಲಿ ತಮಸ್ಸುಗೆ ತಥಾಸ್ತು!
ಹೈದರಾಬಾದ್ ಕರ್ನಾಟಕದಲ್ಲಿ 'ತಮಸ್ಸು' ಚಿತ್ರದ ವಿವಾದ ಸದ್ಯಕ್ಕೆ ಪರಿಹಾರ ಕಂಡಿದೆ. ಇದೇ ಶುಕ್ರವಾರ(ಸೆ.11) 'ತಮಸ್ಸು' ಚಿತ್ರ ಹುಬ್ಬಳ್ಳಿ, ಮೈಸೂರು ಸೇರಿದಂತೆ ರಾಜ್ಯದಾದ್ಯಂತ ತೆರೆಕಾಣುತ್ತಿದೆ. ಇಂದು ಹುಬ್ಬಳ್ಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಪ್ರದರ್ಶಕರು ಹಾಗೂ ಸೆನ್ಸಾರ್ ಮಂಡಳಿಯೊಂದಿಗಿನ ಗುದ್ದಾಟಕ್ಕೆ ತೆರೆಬಿದ್ದಿದೆ.
ಮಾತುಕತೆಗೆ ರಾಕ್ ಲೈನ್ ವೆಂಕಟೇಶ್ ಹುಬ್ಬಳ್ಳಿಗೆ ಬರಬೇಕು. ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರಾಜ್ಯ ಚಿತ್ರ ಪ್ರದರ್ಶಕರ ಮಹಾ ಮಂಡಳ ಅಧ್ಯಕ್ಷ ಓದುಗೌಡರ್ ಆಗ್ರಹಿಸಿದ್ದರು. ಅವರ ಆಗ್ರಹಕ್ಕೆ ಸ್ಪಂದಿಸಿದ ರಾಕ್ ಲೈನ್ ವೆಂಕಟೇಶ್ ಇಂದು ಹುಬ್ಬಳ್ಳಿಗೆ ಆಗಮಿಸಿದ್ದರು. ನಾಲ್ಕು ಗಂಟೆಗೂ ಹೆಚ್ಚು ಕಾಲ ನಡೆದ ಸಂಧಾನ ಸಭೆಯ ಬಳಿಕ 'ತಮಸ್ಸು' ವಿವಾದ ಸುಖಾಂತ್ಯ ಕಂಡಿದೆ.
ತಮಸ್ಸು ನಿರ್ಮಾಪಕರು, ಹೈದರಾಬಾದ್ ಕರ್ನಾಟಕ ಪ್ರದರ್ಶಕರು ಮತ್ತು ಚಿತ್ರ ಮಂದಿರಗಳ ಮಾಲೀಕರು ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಮಧ್ಯೆ ಬುಧವಾರ ಸಂಜೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಹಾಗಾಗಿ ಸಮಸ್ಯೆಯನ್ನು ಬಗೆಹರಿಸಲು ಇಂದು ಹುಬ್ಬಳ್ಳಿಗೆ ಸ್ವತಃ ರಾಕ್ ಲೈನ್ ವೆಂಕಟೇಶ್ ಅವರು ಆಗಮಿಸಿದ್ದರು.
ಬೆಂಗಳೂರು ಪ್ರದರ್ಶಕರು ಹಾಗೂ ಚಿತ್ರಮಂದಿರದ ಮಾಲೀಕರನ್ನಷ್ಟೇ ಪರಿಗಣಿಸಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ಭಾಗವನ್ನು ಕಡೆಗಣಿಸಲಾಗುತ್ತಿದೆ. ನಮಗೆ ನಿರಂತರವಾಗಿ ಕನ್ನಡ ಚಿತ್ರಗಳನ್ನು ನೀಡುತ್ತಿಲ್ಲ. ಈಗ ಏಕಾಏಕಿ 'ತಮಸ್ಸು' ಚಿತ್ರವನ್ನು ಶುಕ್ರವಾರವೇ ಬಿಡುಗಡೆ ಮಾಡಿ ಎಂಬುದು ಎಷ್ಟು ಸರಿ? ಪರಭಾಷಾ ಚಿತ್ರ ಪ್ರದರ್ಶನದ ಹಕ್ಕುಗಳನ್ನು ಈಗಾಗಲೆ ಖರೀದಿಸಲಾಗಿದೆ. ತಮಗೆ ನಷ್ಟವಾಗುತ್ತದೆ ಎಂಬುದು ಹೈದರಾಬಾ ಕರ್ನಾಟಕದ ಪ್ರದರ್ಶಕರು ಅಳಲು ತೋಡಿಕೊಂಡಿದ್ದರು.
ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವಂತೆ ಓದುಗೌಡ ಅವರು ರಾಕ್ ಲೈನ್ ವೆಂಕಟೇಶ್ ಅವರಿಗೆ ಮನವರಿಕೆ ಮಾಡಿದ್ದಾರೆ. ಅವರು ಎಲ್ಲಾ ಬೇಡಿಕೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಚಿತ್ರ ಪ್ರದರ್ಶಕರ ಮಹಾ ಮಂಡಳ ಜುಲೈ 9ರವರೆಗೆ ಫಿಲಂ ಚೇಂಬರ್ ಗೆ ಗಡುವು ನೀಡಿದೆ. ತಮಸ್ಸು ಚಿತ್ರದ ಜೊತೆಗೆ ಶ್ರೀಮೋಕ್ಷ ಚಿತ್ರವೂ ಜೂ.11ರಂದು ತೆರೆಕಾಣುತ್ತಿದೆ. ಮುಂದಿನ ತಿಂಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಕಾರಿಣಿ ಸಭೆಯನ್ನು ಹುಬ್ಬಳ್ಳಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.