Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ಯಾಮ್ ಕ್ಷಮೆ ಯಾಚಿಸಿದ ನಿರ್ಮಾಪಕ ಗಾಂಧಿ
ಹೂ ಚಿತ್ರದ ವಿಮರ್ಶೆಯನ್ನು 'ಸರಿಯಾಗಿ ಬರೆದಿಲ್ಲ' ಎಂದು ಸಿನಿ ಪತ್ರಕರ್ತ ಶ್ಯಾಮ್ ಗೆ ಧಮಕಿ ಹಾಕಿದ ನಿರ್ಮಾಪಕ ದಿನೇಶ್ ಗಾಂಧಿ, ಗುರುವಾರ ಗ್ರೀನ್ ಹೌಸ್ ನಲ್ಲಿ ಪ್ರತ್ಯಕ್ಷರಾದರು. ಕಪ್ಪು ದಿರಿಸಿನಲ್ಲಿದ್ದ ಗಾಂಧಿ, ಶ್ವೇತ ವಸ್ತ್ರಧಾರಿ ಶ್ಯಾಮ್ ಅವರಿಗೆ ಸ್ಸಾರಿ ಎಂದರು.
ಶ್ಯಾಮ್ ಪ್ರಸಾದ್ ಮೇಲೆ ಕೆಟ್ಟ ಕೆಟ್ಟ ಪದ ಬಳಸಿ ಬೈಯ್ದು ಬಿಟ್ಟೆ. ನನ್ನ ಕೋಪ ನಿಗ್ರಹ ಮಾಡಿಕೊಳ್ಳಲಾಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಕ್ಷಮೆಯಾಚನೆ ಪತ್ರವನ್ನು ಬೆಂಗಳೂರು ಮಿರರ್ ಪತ್ರಕರ್ತ ಶ್ಯಾಂಗೆ ನೀಡಿದರು.
ಪತ್ರ ಪಡೆದ ಶ್ಯಾಂ ಮಾತನಾಡಿ, ನಾನು ನನ್ನ ಸಹದ್ಯೋಗಿಗಳು ಹಾಗೂ ನಮ್ಮ ಕಚೇರಿ ಮುಖ್ಯಸ್ಥರೊಡನೆ ಮಾತನಾಡಿ ಚರ್ಚಿಸಿ ದಿನೇಶ್ ಗಾಂಧಿ ವಿರುದ್ಧದ ಕೇಸ್ ವಾಪಾಸ್ ತೆಗೆದುಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಹಿರಿಯ ಪತ್ರಕರ್ತ ಎಎಸ್ ಮೂರ್ತಿ ಮಾತನಾಡಿ, ಗಾಂಧಿಯೊಳಗೆ ಗೋಡ್ಸೆ ಇರಬಾರದು ಎಂದರು. ಗಾಂಧಿ ಕ್ಷಮೆಯಾಚನೆ ಕನ್ನಡ ಚಿತ್ರರಂಗದ ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಇತ್ತೀಚೆಗೆ ನಿರ್ಮಾಪಕ ದಿನೇಶ್ ಗಾಂಧಿ ಧೋರಣೆಯನ್ನು ಖಂಡಿಸಿ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಮೂಹ ಒಂದು ತಾತ್ಕಾಲಿಕ ಸಮಿತಿಯ ರಚಿಸಿ ಹೋರಾಟ ನಡೆಸಲು ಸದಾಶಿವ ಶೆಣೈ ನೇತೃತ್ವ ಪತ್ರಕರ್ತರು ನಿರ್ಣಯ ಕೈಗೊಂಡಿದ್ದರು.