Don't Miss!
- News ನಂಬರ್ ಪ್ಲೇಟ್ ವಿಚಾರದಲ್ಲಿ ವಾಹನ ಮಾಲೀಕರೇ ಈ ತಪ್ಪು ಮಾಡಬೇಡಿ!
- Technology Jio: ಅಗ್ಗದ ಜಿಯೋ ಸಿನಿಮಾ ಪ್ರೀಮಿಯಂ ಚಂದಾದಾರಿಕೆ ಘೋಷಣೆ! 29 ರೂ.ಗಳಿಂದ ಪ್ರಾರಂಭ..
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Automobiles ಹೊಸ ಜೀಪ್ ರಾಂಗ್ಲರ್ ಸಂಪೂರ್ಣ ರಿವ್ಯೂ ವಿಡಿಯೋ: ಆಫ್ರೋಡ್ನಲ್ಲಿ ಇದನ್ನು ಮೀರಿಸುವವರಿಲ್ಲ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಿನಿಮಾ ಸಬ್ಸಿಡಿ ಕಮಿಟಿಯ ಲಂಚಾವತಾರ
ಸಬ್ಸಿಡಿ ಕಮಿಟಿ ಇಪ್ಪತ್ತು ಕನ್ನಡ ಚಿತ್ರಗಳಿಗೆ ಸರ್ಕಾರದ 10 ಲಕ್ಷ ರುಪಾಯಿ ಸಹಾಯ ಧನ ಕೊಡುವಂತೆ ಮಾಡಿರುವ ಶಿಫಾರಸ್ಸಿನಲ್ಲಿ ಟೇಬಲ್ ಕೆಳಗಿನ ವ್ಯವಹಾರ ನಡೆದಿದೆ ಎಂದು ಜಗ್ಗೇಶ್ ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣೇಶನ ಮುಂದೆ ಹೇಳಿದರು.
ಇತ್ತೀಚೆಗೆ ಜನಾರ್ದನ ಹೊಟೇಲಿನಲ್ಲಿ ಒಬ್ಬಾತ ಜಗ್ಗೇಶ್ ಅವರನ್ನು ಭೇಟಿ ಮಾಡಿ, ಸಬ್ಸಿಡಿ ಕಮಿಟಿಯ ಕಾರ್ಯವೈಖರಿಯನ್ನು ವರ್ಣಿಸಿದ್ದಾನೆ. ಆ ವ್ಯಕ್ತಿ ಕೂಡ ಸಬ್ಸಿಡಿ ಕೊಡಿಸುವ ಒಬ್ಬ ಏಜೆಂಟು. ಇಂತಹ ಏಜೆಂಟರ ದೊಡ್ಡ ಪಟಾಲಮ್ಮೇ ಇರುವುದನ್ನು ಜಗ್ಗೇಶ್ ಆತನಿಂದ ಬಾಯಿ ಬಿಡಿಸಿದ್ದಾರೆ. ಒಂದು ಚಿತ್ರಕ್ಕೆ 2 ಲಕ್ಷ ರುಪಾಯಿ ಲಂಚ ಕೊಟ್ಟರೆ 10 ಲಕ್ಷ ರುಪಾಯಿ ಸಹಾಯ ಧನ ಸುಲಭವಾಗಿ ಸಿಕ್ಕುತ್ತದೆ ಅನ್ನೋದು ಗೊತ್ತಾದದ್ದೇ ತಡ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಾರ್ಯಕರ್ತರೂ ಆಗಿರುವ ಜಗ್ಗೇಶ್ ನೇರವಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ಪತ್ರ ಬರೆದಿದ್ದಾರೆ. ಸಬ್ಸಿಡಿ ಮಂಜೂರು ಮಾಡಿರುವ ಪಟ್ಟಿಯನ್ನು ತಡೆ ಹಿಡಿಯುವಂತೆ ಆಗ್ರಹಿಸಿದ್ದಾರೆ.
ಜಗ್ಗೇಶ್ ಪ್ರಕಾರ ಸಹಾಯ ಧನ ಮಂಜೂರಾಗಿರುವ ಚಿತ್ರಗಳ ಪೈಕಿ ಕನಿಷ್ಠ 6 ಚಿತ್ರಗಳು ವಶೀಲಿಬಾಜಿ ನಡೆಸಿವೆ !
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್