Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಪುಟ್ಟಣ್ಣ ಕಣಗಾಲ್’ ಚಿತ್ರಮಂದಿರ ಈಗ ಪೊಲೀಸ್ ಠಾಣೆಯಾಗಿದೆ !
ಬೆಂಗಳೂರು : ಜಯನಗರ ನಾಲ್ಕನೇ ಬ್ಲಾಕ್ನಲ್ಲಿರುವ ಪುಟ್ಟಣ್ಣ ಚಿತ್ರಮಂದಿರ ಇದೀಗ ಪೋಲೀಸ್ ಠಾಣೆಯಾಗಿ ಪರಿವರ್ತಿತವಾಗಿದೆ. ಕಲಾತ್ಮಕ ಚಿತ್ರಗಳ ಮುಕ್ತಿತಾಣವಾಗಿದ್ದ ಚಿತ್ರಮಂದಿರ ರೂಪ ಬದಲಿಸಿದೆ.
ಕನ್ನಡ ಚಿತ್ರರಂಗದಲ್ಲಿ ಸುವರ್ಣ ಹೆಜ್ಜೆ ಮೂಡಿಸಿ, ಅಂಬರೀಷ್-ವಿಷ್ಣುವರ್ಧನ್ರನ್ನು ಕನ್ನಡ ತೆರೆಗೆ ಪರಿಚಯಿಸಿದ ನಿರ್ದೇಶಕ ಪುಟ್ಟಣ್ಣ ಕಣಗಾಲ್ನಾಡಿನ ಮನೆಮಾತು. ಅವರ ನೆನಪನ್ನು ಹಸಿರಾಗಿಡುವ ಚಿತ್ರಮಂದಿರ ಇದೀಗ ವ್ಯವಸ್ಥೆಯ ನಿರ್ಲಕ್ಷ್ಯದ ಕಾರಣದಿಂದ ಪೊಲೀಸ್ ಠಾಣೆಯಾಗಿ ಬದಲಾಗಿದೆ. ಪುಟ್ಟಣ್ಣ ಕಣಗಾಲರಿಗೂ ಪೊಲೀಸ್ ಇಲಾಖೆಗೂ ಎತ್ತಣಿಂದೆತ್ತಣ ಸಂಬಂಧವಯ್ಯ!?
ಚಿತ್ರಮಂದಿರವನ್ನು ನಿರ್ವಹಿಸಲು ಕಷ್ಟವೆಂದು ಕಳೆದ ಎಂಟು ತಿಂಗಳ(ಮೇ.30) ಹಿಂದೆ ಬೀಗ ಜಡಿದ ಸರಕಾರ, ಅದನ್ನು ನವೀಕರಿಸಿ ಪುನಾರಂಭಿಸುವುದಾಗಿ ಮಾತು ಕೊಟ್ಟಿತ್ತು. ಕೊಟ್ಟ ಮಾತು ಬಹುಶಃ ಸರಕಾರಕ್ಕೆ ಮರೆತು ಹೋಗಿದೆ. ಹೀಗಾಗಿ ಪೋಲೀಸ್ ಠಾಣೆ ನಿರ್ವಹಣೆಗೆ ಅನುಮತಿ ನೀಡಲಾಗಿದೆ.
ನವೆಂಬರ್ 27, 1985 ರಂದು ಪುಟ್ಟಣ್ಣ ನಿರ್ದೇಶನದ ಮಸಣದ ಹೂವು ಚಿತ್ರದ ಮೂಲಕ ಇಲ್ಲಿ ಪ್ರದರ್ಶನ ಆರಂಭವಾಗಿತ್ತು. ಪುಟ್ಟಣ್ಣನವರ ಶಿಷ್ಯಚಂದ್ರಶೇಖರ್ ನಿರ್ದೇಶನದ ‘ಪೂರ್ವಪರ’ ಪುಟ್ಟಣ್ಣ ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡ ಕಡೆಯ ಚಿತ್ರವಾಗಿದೆ.
ಹುನ್ನಾರ : ಹದಿನೈದು ದಿನಗಳ ಹಿಂದಷ್ಟೆ ಈ ಚಿತ್ರಮಂದಿರದ ಕ್ಯಾಂಟೀನನ್ನು ಸಂಚಾರಿ ಪೋಲೀಸ್ ಠಾಣೆಯಾಗಿ ಪರಿವರ್ತಿಸಲಾಗಿದೆ. ಈ ಕುರಿತು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪೋಲೀಸ್ ಇಲಾಖೆಗೆ ಅನುಮತಿ ನೀಡಿದ್ದಾರೆ.
ಚಿತ್ರಮಂದಿರದ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಆಯುಕ್ತ ಜ್ಯೋತಿ ರಾಮಲಿಂಗಂ, ತಾತ್ಕಾಲಿಕವಾಗಿ ಮೂರು ತಿಂಗಳ ಕಾಲ ಮಾತ್ರ ಪೋಲೀಸ್ ಠಾಣೆಗೆ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಇಲ್ಲಿ ಪುಟ್ಟಣ್ಣ ಚಿತ್ರಮಂದಿರ ಶಾಶ್ವತವಾಗಿ ಇರುತ್ತದೆ ಎನ್ನುತ್ತಾರೆ.
ಆದರೆ ಹಂತ ಹಂತವಾಗಿ ಚಿತ್ರಮಂದಿರವನ್ನು ನುಂಗುವ ಪ್ರಯತ್ನ ಇದೆಂದು ಚಿತ್ರರಸಿಕರು ಗೊಣಗುತ್ತಿದ್ದಾರೆ. ಕನ್ನಡದ ಪ್ರತಿಭಾನ್ವಿತ ನಿರ್ದೇಶಕ ಪುಟ್ಟಣ್ಣ ಕಣಗಾಲ್ಗೆ ನಾವು ನೀಡುತ್ತಿರುವ ಗೌರವ ಇದೇನಾ ಇದೇನಾ ಎನ್ನುವ ಪ್ರಶ್ನೆ ‘ಧರ್ಮ’ ಸರಕಾರದ ಮುಂದಿದೆ. ಯಾಕೋ ಕನ್ನಡ ಚಿತ್ರೋದ್ಯಮಕ್ಕೆ ಟೈಮ್ ಚೆನ್ನಾಗಿಲ್ಲ !
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್