Don't Miss!
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Automobiles ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- News Annamalai: ಒಂದು ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಕಾಣೆಯಾಗಿದೆ: ಅಣ್ಣಾಮಲೈ ಆರೋಪ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿತಾ ಕೇಸ್: ಗಾನ್ ಕೇಸ್ ಗಳ ಹುಚ್ಚಾಟ
ದರ್ಶನ್ ವಿಜಯಲಕ್ಷ್ಮಿ ಹಾಗೂ ನಿಖಿತಾ ನಡುವಿನ ಘರ್ಷಣೆ, ಕಲಹದ ಲಾಭ ಪಡೆಯಲು ಯತ್ನಿಸಿರುವ ನಿರ್ಮಾಪಕ ಗಣೇಶ್ ಅವರು 'ನಿಕ್ಕಿ ಲವ್ಸ್ ಕಿಲಾಡಿ ನಂ. 9000' ಎಂಬ ಹೆಸರಿನ ಸಿನಿಮಾ ಟೈಟಲ್ ಅನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದ್ದಾರೆ.
ಇದೇ ರೀತಿ ಜನಾರ್ದನ ರೆಡ್ಡಿ ಮೇಲೆ ಸಿಬಿಐ ದಾಳಿ, ಜೈಲು ಪ್ರಕರಣದ ಲಾಭ ಪಡೆಯಲು ಮುಂದಾಗಿರುವ ಸೂರಪ್ಪ ಬಾಬು ಅವರು 'ಬಳ್ಳಾರಿ ಕಿಲಾಡಿ 697' ಎಂಬ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ ಎಂದು ಚಿತ್ರಲೋಕ.ಕಾಂ ವರದಿ ಮಾಡಿದೆ.
ಹುಚ್ಚಾಟಕ್ಕೆ ಕೆಎಫ್ ಸಿಸಿ ಏನು ಹೇಳುತ್ತೆ: ಆದರೆ, ಸಿನಿಮಾ ಶೀರ್ಷಿಕೆಗಳಿಗೆ ಇನ್ನೂ ಕೆಎಫ್ ಸಿಸಿ ಅನುಮತಿ ನೀಡಿಲ್ಲ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಯಾದ ದರ್ಶನ್ ಗೆ ನಂ.9000 ನೀಡಲಾಗಿದೆ. ಅದೇ ರೀತಿ ಚಂಚಲಗುಡ ಜೈಲಿನಲ್ಲಿ ಜನಾರ್ದನ ರೆಡ್ಡಿಗೆ ನಂ.697 ನೀಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.
ಕನ್ನಡ ಚಿತ್ರರಂಗ ಎಂದರೆ ಒಂದೇ ಕುಟುಂಬ ಇದ್ದಂತೆ ಎಂದು ಉದ್ದುದ್ದಾ ಭಾಷಣ ಬಿಗಿಯುವ ಸಿನಿಮಾ ಮಂದಿ ಈಗ ತಮ್ಮ ಕುಟುಂಬದ ಬಿಸಿರಕ್ತದ ಯುವ ನಟನೊಬ್ಬನ ಕುಟುಂಬ ಕಲಹದ ಲಾಭ ಪಡೆಯಲು ಯತ್ನಿಸುತ್ತಿರುವುದು ತೀರಾ ನಾಚಿಕೆಗೇಡಿನ ಸಂಗತಿ.
ದರ್ಶನ್ ಅನ್ನು ನಿಷೇಧ ಮಾಡುವ ತಾಕತ್ತಿಲ್ಲದ ನಿರ್ಮಾಪಕರ ಸಂಘ ಒಂದು ಕಡೆ ನಿಖಿತಾ ಅವರಿಗೆ ನಿಷೇಧ ಹೇರುವ ಮೂಲಕ ಹೇಡಿತನದ ಪರಮಾವಧಿ ಮೆರೆದಿದೆ.
ಇನ್ನೊಂದೆಡೆ ನಿರ್ಮಾಪಕರ ಸಂಘದ ನಿರ್ಧಾರದಿಂದ ಇಡೀ ಚಿತ್ರರಂಗವೇ ಬೇಸರಗೊಂಡಿದ್ದರೂ ಎಲ್ಲೋ ಸಂದೇಶ್ ನಾಗರಾಜ್(ಪ್ರಿನ್ಸ್ ಚಿತ್ರದ ನಿರ್ಮಾಪಕ) ನವರಸನಾಯಕ ಜಗ್ಗೇಶ್ ಮಾತ್ರ ಬಹಿರಂಗವಾಗಿ ನಿರ್ಮಾಪಕರ ಸಂಘದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ಅಂಬರೀಷ್ ಆಗಲಿ, ಮಹಿಳಾ ಸಂಘಟನೆಗಳಾಗಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.
ವಿಘ್ನ ಸಂತೋಷಿ ನಿರ್ಮಾಪಕರ ಸಂಘದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕಂಡವರ ಮನೆಗೆ ಬೆಂಕಿ ಬಿದ್ದರೆ ಅದೇ ಬೆಂಕಿಯಲ್ಲಿ ಬೀಡಿ ಹಚ್ಚಿ ದಮ್ ಎಳೆಯುವ ಚಾಲಾಕಿಗಳು ಇವರು.