Don't Miss!
- Lifestyle ಹೋಳಿ ದಿನ ಸ್ಕೂಟಿಯಲ್ಲಿ ಟೈಟಾನಿಕ್ ಪೋಸ್ ನೀಡಿ ದೊಪ್ಪೆಂದು ಬಿದ್ದ ಹುಡುಗಿಗೆ ಬಿತ್ತು ದುಬಾರಿ ಫೈನ್
- News ಮಳೆ ಬರದೇ ಇದ್ದರೆ ಮುಗೀತು ಕಥೆ!
- Sports ರೋಹಿತ್ vs ಹಾರ್ದಿಕ್: ಸತತ ಸೋಲಿನ ನಡುವೆಯೇ ಮುಂಬೈ ಇಂಡಿಯನ್ಸ್ ಇಬ್ಭಾಗ!?
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುಮನಾ ಕಿತ್ತೂರು ಸಖತ್ ಬೇಜಾರಾಗಿದ್ದಾರೆ
*ಜಯಂತಿ
ಇಂಥ ಕಾರಣಕ್ಕೆ ಚಿತ್ರ ಸರಿಯಾಗಿಲ್ಲ ಎಂದು ಹೇಳಿದ್ದರೆ ಸುಮನಾಗೆ ಬೇಸರ ಆಗುತ್ತಿರಲಿಲ್ಲವೇನೋ? ತರುಣಿಯೊಬ್ಬಳು ಚಿತ್ರ ನಿರ್ದೇಸಿದ್ದಾಳೆ ಎನ್ನುವುದನ್ನು ಅರಗಿಸಿಕೊಳ್ಳಲಾಗದ ಕಾರಣಕ್ಕೆ ಅಪಸ್ವರಗಳು ಕೇಳಿಸುತ್ತಿವೆ. ಒಂದು ವಿಮರ್ಶೆಯಲ್ಲಂತೂ ಸುಮನಾಗೆ ನಿರ್ದೇಶನದ ಅಆಇಈ ಗೊತ್ತಿಲ್ಲ ಎಂದು ಜರೆಯಲಾಗಿದೆಯಂತೆ. ಇಂಥ ಕೊಂಕುಗಳ ಬಗ್ಗೆ ಸುಮನಾ ತಮ್ಮ ಆಪ್ತೇಷ್ಟರಲ್ಲಿ ಹೇಳಿಕೊಂಡು ನೋವು ತೋಡಿಕೊಳ್ಳುತ್ತಿದ್ದಾರೆ.
ಚಿತ್ರಕಥೆಗೆ ಸುಮನಾ ಬದ್ಧರಾಗಿದ್ದಾರೆ. ಅಗ್ನಿ ಶ್ರೀಧರ್ ಹಾಕಿಕೊಟ್ಟ ಲಕ್ಷ್ಮಣರೇಖೆಯಿಂದ ಇಂಚಷ್ಟೂ ಹೊರಬರಲು ಅವರಿಗೆ ಸಾಧ್ಯವಾಗಿಲ್ಲ ಎನ್ನುವುದು ಮತ್ತೊಂದು ಆರೋಪ. 'ಆರೋಪದಲ್ಲಿ ಹುರುಳಿಲ್ಲ. ಚಿತ್ರಕಥೆಯಾಚೆಗೆ ನಿರ್ಣಯ ಕೈಗೊಳ್ಳಲಿಕ್ಕೆ ನನಗೆ ಸ್ವಾತಂತ್ರ್ಯವಿತ್ತು. ಹಲವೆಡೆಗಳಲ್ಲಿ ಚಿತ್ರಕಥೆ ಮೀರಿ ದೃಶ್ಯಗಳನ್ನು ಸಂಯೋಜಿಸಿದ್ದಿದೆ. ಇದ್ಯಾವುದೂ ಕೊಂಕಿಗರ ಕಣ್ಣಿಗೆಬೀಳುತ್ತಿಲ್ಲ' ಎನ್ನುವುದು ಯುವ ನಿರ್ದೇಶಕಿಯ ಬೇಜಾರು.
ಈ ನಡುವೆ ಸುಮನಾ ಅವರಿಗೆ ನಿರ್ದೇಶನದ ಮತ್ತಷ್ಟು ಅವಕಾಶಗಳು ಬಂದಿವೆಯಂತೆ. ಅವರು ಒಂದೆರಡು ಚಿತ್ರಗಳನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಹಿಂದಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ ಎನ್ನುವ ಗುಸುಗುಸೂ ಇದೆ. ಸದ್ಯಕ್ಕೆ ಸುಮನಾ ಯಾವುದನ್ನೂ ದೃಢೀಕರಿಸುತ್ತಿಲ್ಲ. ಬದಲಿಗೆ ನಗುತ್ತಾರೆ.