Don't Miss!
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Technology ಇಂದು 3D ಕರ್ವ್ಡ್ ಡಿಸ್ಪ್ಲೇ ಇರುವ ಈ ಫೋನಿನ ಸೇಲ್!..ಆಫರ್ ಬೆಲೆ ಎಷ್ಟು?
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೆಡ್ಲಿ ಆದಿತ್ಯನಿಗೆ ರಾಗಿಣಿ ದ್ವಿವೇದಿ ಕಪಾಳಮೋಕ್ಷ!
ಸದ್ಯಕ್ಕೆ ಸ್ಯಾಂಡಲ್ವುಡ್ನಲ್ಲಿ ಅಪಾರ ಅವಕಾಶಗಳನ್ನು ಬಾಚಿಕೊಂಡಿರುವ ನಟಿ ರಾಗಿಣಿ ದ್ವಿವೇದಿ. ಶಿವರಾಜ್ ಕುಮಾರ್ ಜೊತೆ ಶಿವ, ಉಪೇಂದ್ರ ಜೊತೆ ಆರಕ್ಷಕ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತ್ತೀಚೆಗೆ ಡೆಡ್ಲಿ ಆದಿತ್ಯನಿಗೆ ರಾಗಿಣಿ ದ್ವಿವೇದಿ ಕಪಾಳಮೋಕ್ಷ ಮಾಡಿದ್ದಾರೆ. ಇದನ್ನು ಆಕೆಯೇ ಸ್ವತಃ ಹೇಳಿಕೊಂಡಿದ್ದಾರೆ.
ಆದಿತ್ಯನಿಗೆ ಒಂದಲ್ಲ ಎರಡಲ್ಲ ಎಂಟು ಬಾರಿ ಕಪಾಳಕ್ಕೆ ಹೊಡೆದದ್ದಾಗಿ ರಾಗಿಣಿ ಹೇಳಿದ್ದಾರೆ. ಹೌದು ಯಾಕೆ ಹೊಡೆದಿರಿ. ಆದಿತ್ಯ ಅಂತಹ ತಪ್ಪೇನು ಮಾಡಿದ ಎನ್ನಲಾಗಿ. ಆಗ ರಾಗಿಣಿ ಸತ್ಯ ಹೊರಹಾಕಿದರು. ಅದೇನಪ್ಪಾ ಅಂದ್ರೆ, ಇದೆಲ್ಲಾ ಎಂ ಎಸ್ ರಮೇಶ್ ನಿರ್ದೇಶಿಸುತ್ತಿರುವ 'ಟಿಪ್ಪು' ಚಿತ್ರದ ಕತೆ ಎಂದು ಗೊತ್ತಾಯಿತು.
ಇದೇ ರೀತಿ ಹೀರೋ ಕಪಾಳಕ್ಕೆ ಬಾರಿಸುವ ಸನ್ನಿವೇಶಗಳು ಉಳಿದ ಚಿತ್ರಗಳಿಂದಲೂ ಬಂದಿತ್ತಂತೆ. ಆದರೆ ತನಗಿಂತಲೂ ಹಿರಿಯ ನಟರ ಕಪಾಳಕ್ಕೆ ಹೊಡೆಯುವುದು ಅಷ್ಟು ಸರಿ ಅಲ್ಲ ಅನ್ನಿಸಿ ಆ ದೃಶ್ಯಗಳನ್ನು ಕೈಬಿಟ್ಟಿದ್ದಾಗಿ ತಿಳಿಸಿದ್ದಾರೆ ರಾಗಿಣಿ. ಗುರುಕಿರಣ್ ಸಂಗೀತ ನೀಡಿರುವ 'ಟಿಪ್ಪು' ಚಿತ್ರದಲ್ಲಿ ರಂಗಾಯಣ ರಘು, ಶೋಭರಾಜ್, ಮಾಲತಿ ಸರ್ ದೇಶಪಾಂಡೆ, ಸಿಮ್ರಾನ್, ಕಮಲ, ಅವಿನಾಶ್ ಅಭಿನಯಿಸಿದ್ದಾರೆ. (ದಟ್ಸ್ಕನ್ನಡ ಸಿನಿವಾರ್ತೆ)