Don't Miss!
- News Rain Alert: ಮಳೆ.. ಮಳೆ.. ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆ ಗ್ಯಾರಂಟಿ!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಜನಿ ಪಾದಕ್ಕೆರಗಿ ಐಶ್ವರ್ಯ ರೈ ಶಿರಸಾಸ್ಟಾಂಗ ನಮಸ್ಕಾರ
'ರಾಜ್ ನೀತಿ' ಚಿತ್ರ ಬಿಡುಗಡೆ ಸಂದರ್ಭದಲ್ಲಿ ಮನೋಜ್ ಬಾಜ್ ಪೈ ಅವರ ಕಾಲಿಗೆ ಕತ್ರಿನಾ ಕೈಫ್ ಬಿದ್ದು ಆಶೀರ್ವಚನ ಪಡೆದಿದ್ದರು. ಇದೀಗ ತಮಿಳು ಚಿತ್ರನಟ ರಜನಿಕಾಂತ್ ಕಾಲಿಗೆ ಐಶ್ವರ್ಯ ರೈ ಎರಗಿ ಶಿರಸಾಸ್ಟಾಂಗ ನಮಸ್ಕಾರ ಮಾಡಿದ ಘಟನೆ ವರದಿಯಾಗಿದೆ.
ರಜನಿಕಾಂತ್, ಐಶ್ವರ್ಯ ರೈ ಮುಖ್ಯಭೂಮಿಕೆಯಲ್ಲಿರುವ ಚಿತ್ರ 'ಎಂಧಿರನ್' ಚಿತ್ರೀಕರಣ ಮುಗಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಅನಿರೀಕ್ಷಿತ ಘಟನೆಯಿಂದ ರಜನಿಕಾಂತ್ ತಬ್ಬಿಬ್ಬಾಗಿದ್ದಾರೆ. ಬಳಿಕ ಸಾವರಿಸಿಕೊಂಡು ಆಶೀರ್ವದಿಸಿದ್ದಾಗಿ ಚೆನ್ನೈ ಮೂಲಗಳು ತಿಳಿಸಿವೆ.
ಸುದೀರ್ಘ ಎರಡು ವರ್ಷಗಳಿಂದ 'ಎಂಧಿರನ್' ಚಿತ್ರೀಕರಣ ನಡೆಯುತ್ತಿದೆ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯವಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಐಶ್ವರ್ಯ ರೈ ಕಾಲಿಗೆ ಎರಗಿದ ಬಳಿಕ ರಜನಿಕಾಂತ್ ಅವರಿಗೆ ಮಾತೆ ಹೊರಡಲಿಲ್ಲವಂತೆ. ಬಳಿಕ ಚೇತರಿಸಿಕೊಂಡು ನಿಮ್ಮ ಮಾವನವರ ನಟನೆ ಎಂದರೆ ನನಗಿಷ್ಟ ಎಂದರಂತೆ.
ಒಟ್ಟಿನಲ್ಲಿ ಈ ಬಹುನಿರೀಕ್ಷಿತ ಚಿತ್ರದ ಧ್ವನಿಸುರುಳಿ ಜುಲೈ 31ರಂದು ಕೌಲಾಲಂಪುರದಲ್ಲಿ ಬಿಡುಗಡೆಯಾಗಲಿದೆ. ಎ ಆರ್ ರೆಹಮಾನ್ ಸಂಗೀತ ಸಂಯೋಜಿಸಿರುವ ಚಿತ್ರ ಇದಾಗಿದೆ. ಚಿತ್ರದ ನಿರ್ಮಾಪಕ ಕಲಾನಿಧಿ ಮಾರನ್ ಸಹ ಐಶ್ವರ್ಯ ರೈ ಅವರ ಅನಿರೀಕ್ಷಿತ ಘಟನೆಯಿಂದ ಚಕಿತರಾದರು ಎನ್ನುತ್ತವೆ ಮೂಲಗಳು.