twitter
    For Quick Alerts
    ALLOW NOTIFICATIONS  
    For Daily Alerts

    ಜಗದ್ಗುರುವನ್ನು ಕಡೆಗಣಿಸಿದ ಆಯ್ಕೆ ಸಮಿತಿ

    By Staff
    |

    ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡದಿರುವ ಬಗ್ಗೆ ಶ್ರೀರೇಣುಕಾ ಪ್ರೊಡಕ್ಷನ್ಸ್ ಸಂಸ್ಥೆ ತೀವ್ರ ಬೇಸರ ವ್ಯಕ್ತಪಡಿಸಿದೆ. 2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಆಯ್ಕೆ ಕ್ರಮವನ್ನು ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರತಂಡಟೀಕಿಸಿದೆ.

    ಜಗದ್ಗುರು ಶ್ರೀ ರೇಣುಕಾಚಾರ್ಯ ಮಾಹಾತ್ಮೆ ಚಿತ್ರವು ಸದಭಿರುಚಿಯ ಸಾಮಾಜಿಕ ಕಳಕಳಿಯುಳ್ಳ ಚಿತ್ರವಾಗಿದೆ. ಇಂತಹ ಉತ್ತಮ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡದಿರುವ ಬಗ್ಗೆ ನಮ್ಮ ಚಿತ್ರತಂಡಕ್ಕ್ಕೆ ನೋವುಂಟಾಗಿದೆ. ಹೀಗೆಂದು ಜಗದ್ಗುರು ಶ್ರೀ ರೇಣುಕಾಚಾರ್ಯ ಮಹಾತ್ಮೆ ಚಿತ್ರದ ನಿರ್ಮಾಪಕ ರುದ್ರ ಪ್ರಕಾಶ್ ಮತ್ತು ನಿರ್ದೇಶಕ ಬಿ.ಎ.ಓಂಕಾರ್ ಅವರು ಆಯ್ಕೆ ಸಮಿತಿಯನ್ನು ಪ್ರಶ್ನಿಸಿದ್ದಾರೆ.

    ಲಾಂಗು, ಮಚ್ಚ್ಚು, ಕೊಚ್ಚು ಚಿತ್ರಗಳನ್ನು ಪ್ರೋತ್ಸಾಹಿಸುವುದನ್ನು ಬಿಡಬೇಕು. ಸದಭಿರುಚಿಯ, ಮೌಲ್ಯಾಧಾರಿತ, ಸಾಮಾಜಿಕ ಕಳಕಳಿಯ, ಧಾರ್ಮಿಕ ಚಲನ ಚಿತ್ರಗಳನ್ನು ಪ್ರೊತ್ಸಾಹಿಸಬೇಕು ಎಂದು ಓಂಕಾರ್ ಮನವಿ ಮಾಡಿಕೊಂಡಿದ್ದಾರೆ.

    (ದಟ್ಸ್ ಕನ್ನಡ ಚಿತ್ರವಾರ್ತೆ)
    ಪೂರಕ ಓದಿಗೆ

    ಇದು ಮೂರನೆ ದರ್ಜೆ ಪ್ರಶಸ್ತಿ: ಚಂದ್ರು ಮಂಜು
    ಅಗ್ನಿ ಶ್ರೀಧರ್ ಮತ್ತು ಮಂಜುರಿಂದ ಪ್ರಶಸ್ತಿ ತಿರಸ್ಕಾರ

    Tuesday, January 13, 2009, 18:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X