Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ದರ್ಶನ್ ಬಗ್ಗೆ ಆರ್ಯವರ್ಧನ್ ಸಂಖ್ಯಾಶಾಸ್ತ್ರ
ಕವಡೆ ಶಾಸ್ತ್ರ, ಗಿಳಿ ಶಾಸ್ತ್ರ, ಇಲಿ ಶಾಸ್ತ್ರ, ಹಸ್ತ ಸಾಮುದ್ರಿಕೆ ಮುಂತಾದ ಜ್ಯೋತಿಷ್ಯ ಸಂಬಂಧಿ ಶಾಸ್ತ್ರಗಳಿಗಿಂತಲೂ ಹೆಚ್ಚಾಗಿ ಜನ ಸಂಖ್ಯಾಶಾಸ್ತ್ರದ ಕಡೆ ಒಲವು ತೋರಿಸುತ್ತಿದ್ದಾರೆ. ಈಗಾಗಲೆ ಸುವರ್ಣ ಹಾಗೂ ಸಮಯ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಹಲವು ಕರಾವಕ್ಕಾದ ಭವಿಷ್ಯಗಳನ್ನು ನುಡಿದಿದ್ದಾರೆ.
ಅವಧಿಗೆ ಮುನ್ನವೇ ಯಡಿಯೂರಪ್ಪ ಅಧಿಕಾರ ಕಳೆದುಕೊಳ್ಳುವ, ಮಂತ್ರಾಲಯ ಮಠ ನೀರಿನಲ್ಲಿ ಮುಳುಗುವ ಭವಿಷ್ಯವನ್ನು ಇವರು ನುಡಿದಿದ್ದರು. ಜನನ ದಿನಾಂಕ, ತಿಂಗಳು ಹಾಗೂ ವರ್ಷ ಕೂಡಿದಾಗ 9 ಸಂಖ್ಯೆ ಬಂದರೆ ಅಪಾಯ ತಪ್ಪಿದ್ದಲ್ಲ ಎನ್ನುತ್ತಾರೆ ಆರ್ಯವರ್ಧನ. ವೈಎಸ್ ರಾಜಶೇಖರ ರೆಡ್ಡಿ ದುರಂತ ಸಾವಿಗೀಡಾಗಿದ್ದು, ಜನಾರ್ದನ ರೆಡ್ಡಿ ಜೈಲು ಸೇರಿದ್ದು ಇವೆಲ್ಲಾ ಘಟನೆಗಳು ನಡೆದದ್ದು ಬಹುತೇಕ 9ನೇ ದಿನಾಂಕಗಳಂದೇ.
ಈಗ ನೇರವಾಗಿ ವಿಷಯಕ್ಕೆ ಬರೋಣ. ನಟ ದರ್ಶನ್ ಜನ್ಮ ದಿನಾಂಕ 16.02.1977. ಈ ಅಂಕಿಗಳನ್ನು ಕೂಡಿದರೆ 33 ಬರುತ್ತದೆ. ಇಂತಹವರಿಗೆ ತುಂಬಾ ಹಣ ಮಾಡುವ ಯೋಗವಿದೆಯಂತೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರಿನ ಸಂಖ್ಯೆ ಲೆಕ್ಕಹಾಕಿದರೆ ಸಂಖ್ಯಾಶಾಸ್ತ್ರದ ಪ್ರಕಾರ ಒಂದು ಬರುತ್ತದೆ. ಆತನ ಮನೆ ನಂಬರ್ 217. ಅದನ್ನು ಕೂಡಿದರೆ ನಮ್ಮ ಲೆಕ್ಕಾಚಾರದ ಪ್ರಕಾರ ಒಂದು ಬರುತ್ತದೆ.