Don't Miss!
- News ಬಕ್ರಾ ಮಾಡಲು ಇಲ್ಲಿಗೆ ಬಂದಿದ್ದೀರಾ?, ಬೆಳಗಾವಿಗೆ ನಿಮ್ಮ ಕೊಡುಗೆ ಏನು?: ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶ್ನೆ
- Automobiles KTM Duke 125 ಬೆಲೆಗೆ ಯಾವೆಲ್ಲಾ ಬೈಕ್ಗಳು ಸಿಗುತ್ತೆ ಗೊತ್ತಾ?: ಪಲ್ಸರ್ನಿಂದ ಹಿಡಿದು MT 15 ವರೆಗೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕ ಕೆ.ಮಂಜು ಹೇಳಿದ ಲಾಸು ಕಥೆ
ಒಂದು ಮ್ಯಾಟಿನಿ ಶೋ ಹೌಸ್ಫುಲ್ ಮಾಡುವ ಯೋಗ್ಯತೆ ಇಲ್ಲದ ನಟರು ಸಂಭಾವನೆ ತಗ್ಗಿಸದೇ ಹೋದರೆ ನಿರ್ಮಾಪಕರಿಗೆ ಉಳಿಗಾಲವಿಲ್ಲ ಅನ್ನೋದು ಅವರ ವಾದ. ಇದಕ್ಕೆ ಅವರೊಂದು ಅಂಕಿ-ಅಂಶ ಕೂಡ ಮುಂದಿಟ್ಟರು. ಈ ವರ್ಷ ಏನಿಲ್ಲವೆಂದರೂ 350 ಕೋಟಿ ರೂಪಾಯಿಯನ್ನು ಕನ್ನಡದ ಚಿತ್ರ ನಿರ್ಮಾಪಕರು ಕಳಕೊಂಡಿದ್ದಾರೆ! ಹಾಗೆ ಕಳಕೊಂಡವರಲ್ಲಿ ಅವರೂ ಒಬ್ಬರು ಎಂಬುದರಲ್ಲಿ ಅನುಮಾನವೇ ಇಲ್ಲ. ಗಣೇಶನ 'ಅರಮನೆ" ಚಿತ್ರವನ್ನು ಓಡಿಸಿ ಸುಸ್ತಾಗಿದ್ದ ಅವರು ಅದೇ ನಾಯಕನ ಒತ್ತಡಕ್ಕೆ ಮಣಿದು ಶತದಿನೋತ್ಸವದ ಸಮಾರಂಭವನ್ನೂ ನಡೆಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ. ಇಂತಿಪ್ಪ ಗಂಡುಗಲಿ ಗುಡುಗಲು ಸ್ಟಾರ್ ಎಂಬ ಪದವೇ ಸವಕಲಾಗಿರುವುದೂ ಕಾರಣವಿದ್ದೀತು.
ವಿಷ್ಣುವರ್ಧನ್ ಆಪ್ತೇಷ್ಟರಲ್ಲಿ ಒಬ್ಬರಾದ ಮಂಜು ತಮ್ಮ ಗುರುಗಳ ಮಹತ್ವಾಕಾಂಕ್ಷೆಯನ್ನೂ ಮುಂದಿಟ್ಟರು. ಜಯನಗರದ ಪುಟ್ಟಣ್ಣ ಚಿತ್ರಮಂದಿರವನ್ನು ಮತ್ತೆ ಸಿನಿಮಾ ನೋಡುವ ಮಟ್ಟಕ್ಕೆ ರೂಪುಗೊಳಿಸಲು ವಿಷ್ಣು ಒಂದು ಕೋಟಿ ರೂಪಾಯಿ ಖರ್ಚು ಮಾಡಲು ತಯಾರಿದ್ದರಂತೆ. ಆದರೆ, ಸರ್ಕಾರ ಅದಕ್ಕೆ ಸ್ಪಂದಿಸಲಿಲ್ಲ ಅನ್ನೋದು ಅವರ ದೂರು. ಅಂದಹಾಗೆ, ಜಯನಗರದ ಶಾಂತಿ, ನಂದ, ಪುಟ್ಟಣ್ಣ ಎಲ್ಲಾ ನಿರ್ನಾಮವಾದ ಮೇಲೆ ಈಗ ಅಲ್ಲಿ ಇನಾಕ್ಸ್ ತಲೆಎತ್ತಿದೆ. ಟಿಕೇಟಿಗೆ ನೂರೈವತ್ತು ಇನ್ನೂರು ಸುಲಿಯುತ್ತಾ ತಲೆಬೋಳಿಸುತ್ತಿದೆ ಅಂತಲೂ ಮಂಜು ಅನೌಪಚಾರಿಕವಾಗಿ ಮಾತಾಡುತ್ತಾ ಚಟಾಕಿ ಹಾರಿಸಿದರು.
'ಅದು
ಸರಿ
ಮಂಜಣ್ಣ,
ಅರಮನೆಯಿಂದ
ಬಂದ
ಲಾಭ
ಎಷ್ಟು"
ಅಂತ
ಯಾರೋ
ಕೇಳಲಾಗಿ,
ಮಂಜು
ಕಣ್ಣಲ್ಲೇ
ಏನೋ
ಹೇಳುತ್ತಾ
ಜಾಗ
ಖಾಲಿ
ಮಾಡಿದರು!
(ದಟ್ಸ್
ಕನ್ನಡ
ಚಿತ್ರವಾರ್ತೆ)