twitter
    For Quick Alerts
    ALLOW NOTIFICATIONS  
    For Daily Alerts

    ವೀರೇಶ್ ಚಿತ್ರಮಂದಿರದಿಂದ 'ಮೈಲಾರಿ' ಎತ್ತಂಗಡಿ

    By Rajendra
    |

    ಚಿತ್ರವೊಂದು ಯಶಸ್ವಿ ಪ್ರದರ್ಶನ ಕಾಣುತ್ತಿದ್ದಾಗಲೆ ಅದನ್ನು ಎತ್ತಂಗಡಿ ಮಾಡುವುದು ಗಾಂಧಿನಗರಕ್ಕೇನು ಹೊಸದಲ್ಲ. ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 'ಮೈಲಾರಿ' ಚಿತ್ರಕ್ಕೂ ಇದೇ ಗತಿಯಾಗಿದೆ. 'ಮೈಲಾರಿ' ಯಶಸ್ವಿ ಪ್ರದರ್ಶನ ಕಾಣುತ್ತಿದ್ದರೂ ವೀರೇಶ್ ಚಿತ್ರಮಂದಿರದಿಂದ ಎತ್ತಂಗಡಿ ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಗರಂ ಆಗಿದ್ದಾರೆ.

    ರಮೇಶ್ ಯಾದವ್ ನಿರ್ಮಾಣದ 'ಬಾಸ್' ಚಿತ್ರ ಜನವರಿ 14ರಂದು ತೆರೆಗೆ ಅಪ್ಪಳಿದ್ದು, ಇದೇ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಮೈಲಾರಿ' ಚಿತ್ರಕ್ಕೆ ಕೊಕ್ ನೀಡಲಾಗಿದೆ. ಈ ಸಂಬಂಧ 'ಮೈಲಾರಿ' ನಿರ್ಮಾಪಕರು ವೀರೇಶ್ ಚಿತ್ರಮಂದಿರದ ಆಡಳಿತ ಮಂಡಳಿ ವಿರುದ್ಧ ಹರಿಹಾಯ್ದಿದ್ದಾರೆ.

    'ಮೈಲಾರಿ'ಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಎಂದು ಶಿವಣ್ಣನ ಅಭಿಮಾನಿಗಳು ರೇಸ್ ಕೋರ್ಸ್ ರಸ್ತೆಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟಿಸಿದರು. ಪತ್ರಕರ್ತ ಅಗ್ನಿ ಶ್ರೀಧರ್ ಹಾಗೂ ನಿರ್ಮಾಪಕ ರವೀಂದ್ರಅವರು 'ಮೈಲಾರಿ' ಚಿತ್ರದ ನಿರ್ಮಾಪಕ ಕೆ ಪಿ ಶ್ರೀಕಾಂತ್ ಅವರಿಗೆ ಸಾಥ್ ನೀಡಿದರು.

    ಈ ಸಂಬಂಧ ಫಿಲಂ ಚೇಂಬರ್ ಏನು ಕ್ರಮಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ. ದರ್ಶನ್ ಮುಖ್ಯಭೂಮಿಕೆಯಲ್ಲಿರುವ 'ಬಾಸ್' ಚಿತ್ರಕ್ಕೆ ಬೆಳಗಿನ ಪ್ರದರ್ಶನ ಹಾಗೂ 'ಮೈಲಾರಿ'ಗೆ ಉಳಿದ ಪ್ರದರ್ಶನಗಳನ್ನು ನೀಡುವ ರಾಜಿ ಸೂತ್ರವನ್ನು ಇಬ್ಬರೂ ನಿರ್ಮಾಪಕರ ಮುಂದಿಡಲಾಗಿದೆ ಎನ್ನಲಾಗಿದೆ. [ಹ್ಯಾಟ್ರಿಕ್ ಹೀರೋ]

    English summary
    Hat Trick Hero Shivarajkumar lead movie Mylari producers protest against Veeresh theater management for remove two shows of its run and allot the shows to Ramesh Yadav's Boss which is hitting screens on January 14. Agni Sridhar and producer Ravindra have also joined K.P.Srikanth, the producer of Mylari to present the case on behalf of the film to the members of the film chamber.
    Friday, January 14, 2011, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X