Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರಕ್ಕೆ ಒನಕೆ ಓಬವ್ವ ಹೆಸರು; ಇತಿಹಾಸಕ್ಕೆ ಬಗೆದ ದ್ರೋಹ
ಸಾಹಿತ್ಯ ಸಂಸ್ಕೃತಿ ಇತಿಹಾಸದ ಬಗ್ಗೆ ಗೌರವವಿರುವ ಯಾರೂ ಇಂತಹ ಕೆಲಸ ಮಾಡಲಾರರು. ನಮ್ಮ ನಾಡು ಕಿತ್ತೂರು ರಾಣಿ ಚೆನ್ನಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಝಾನ್ಸಿರಾಣಿ ಮುಂತಾದ ವೀರವನಿತೆಯರನ್ನು ಕಂಡಿದೆ. ಅವರೆಲ್ಲಾ ತಮ್ಮ ರಾಜ್ಯ ಕೋಶ ಅಧಿಕಾರ ಆಡಳಿತವನ್ನು ಉಳಿಸಿಕೊಳ್ಳ ಲೋಸುಗ ಹೋರಾಟ ನಡೆಸಿದವರು.
ಆದರೆ ಓಬವ್ವ ದೊರೆ ಮದಕರಿ ನಾಯನಕ ಮೇಲಿನ ಭಕ್ತಿ ದೇಶಪ್ರೇಮದ ಸಲುವಾಗಿ ಶತ್ರುಗಳ ವಿರುದ್ಧ ಕೇವಲ ಒನಕೆ ಹಿಡಿದು ಹೋರಾಡಿದ ಛಲವಾದಿ ಜನಾಂಗದ ನಿಸ್ವಾರ್ಥ ಮಹಿಳೆಯೆಂಬುದು ವಿಶೇಷ. ಇಂತಹ ಪ್ರಾತಃ ಸ್ವರಣೀಯ ದಲಿತ ಮಹಿಳೆಯ ಹೆಸರನ್ನು ಕೇವಲ ಹಣ ಗಳಿಕೆಯ ದೃಷ್ಟಿಯಿಂದ ಆಕೆಯ ಜೀವನ ಚರಿತ್ರೆಗೆ ಸಂಬಂಧಪಡಹೆಸರನ್ನಿಟ್ಟು ಅಪಮೌಲ್ಯ ಗೊಳಿಸುವುದು ಖಂಡನೀಯ.
ಈ ಇಂದೆ ಇಂತಹ ಹೀನಕೃತ್ಯಗಳು ನಡೆದಾಗಲೂ ಖಂಡಿಸಲಾಗಿದೆ. ನಂತರವೇ 'ಮಾಸ್ತಿ' ಎಂಬ ಚಿತ್ರ 'ಮಸ್ತಿ' ಯಾಗಿದ್ದು, 'ಕಿರಣ್ ಬೇಡಿ' ಕನ್ನಡದ ಕಿರಣ್ ಬೇಡಿಯಾಗಿದ್ದು, 'ವೀರಮಕರಿ' ಈ ಶತಮಾನದ ಬಾಲ ಅಂಟಿಸಿಕೊಂಡಿದ್ದು, ಹಕ್ಕಬುಕ್ಕ ಬದಲಾಗಿದ್ದು.
ಇಷ್ಟಾದರೂ ಪದೇ ಪದೆ ಇಂತಹ ಪ್ರಸಂಗಗಳು ಪುನರಾರ್ತನೆಯಾಗುತ್ತಿರುವುದು ನಿರ್ಮಾಪಕ ನಿರ್ದೇಶಕರ ಸಾಂಸ್ಕೃತಿಕ ದಿವಾಳಿತನವೆನ್ನೋಣವೆ? ಈ ಕುರಿತಂತೆ ಈಗಾಗಲೆ ಒಬವ್ವೆಯ ವಂಶಸ್ಥರು ಹಾಗೂ ಛಲವಾದಿ ಸಂಸ್ಥಾನದ ಬಸವ ನಾಗಿದೇವ ಮಹಾಸ್ವಾಮಿಗಳು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಚಿತ್ರತಂಡದವರಿಗೆ ಇದು ತಿಳಿದರೂ ಈಗಲೂ ಜಾಹೀರಾತಿನಲ್ಲಿ 'ಒನಕೆ ಓಬವ್ವ' ಹೆಸರನ್ನು ಮುಂದುವರೆಸಿರುವುದು ಆಕೆಯ ವಂಶಸ್ಥರಿಗೆ ಮಾಡಿದ ಅಪಮಾನ. ಹೆಸರಿನ ಅಡಿಬರಹವೇ ವಿಚಿತ್ರ! (ಸೈಲೆಂಟ್ ಇದ್ದರೆ ಅನಂತನಾಗ್, ವಾಯಿಲೆಂಟ್ ಅಂದರೆ ಶಂಕರನಾಗ್!?) ಕೂಡಲೆ ಹೆಸರನ್ನು ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸುವುದು ಅನಿವಾರ್ಯ.