Don't Miss!
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles ಹೊಸ ಸುಜುಕಿ V-Strom 800 DE ಬೈಕ್ ಬಿಡುಗಡೆ: ಬೆಲೆ ರೂ.10.30 ಲಕ್ಷ
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದಿ ಸೀರಿಯಲ್ ಡಬ್ಬಿಂಗ್ : ಜೀ ಟಿವಿ ಕಚೇರಿ ಧ್ವಂಸ
'ಝಾನ್ಸಿ ಕಿ ರಾಣಿ' ಹಿಂದಿ ಧಾರವಾಹಿಯನ್ನು ಯಥಾವತ್ತಾಗಿ ಕನ್ನಡಕ್ಕೆ ಡಬ್ ಮಾಡಿ ಪ್ರಸಾರ ಮಾಡಲಾಗುತ್ತಿತ್ತು. ಈ ಸಂಬಂಧ ಲಿಖಿತ ಮನವಿಗೆ ಸ್ಪಂದಿಸದ ಜೀ ಟಿವಿ ಆಡಳಿತ ಮಂಡಳಿ ವಿರುದ್ದ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕಲಾವಿದರು ಕಚೇರಿಯ ಕಂಪ್ಯೂಟರ್, ಕಿಟಕಿ, ಗಾಜುಗಳನ್ನು ಪುಡಿಗೈದಿದ್ದಾರೆ. ರವಿಕಿರಣ್, ಅಭಿನಯಾ ಮುಂತಾದ ಕಲಾವಿದರ ವಿರುದ್ದ ಆಡಳಿತ ಮಂಡಳಿ ದೂರು ನೀಡಿದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ತದನಂತರ, ಜೀ ಟಿವಿ ದೂರು ವಾಪಸು ಪಡೆದುಕೊಂಡ ಮೇಲೆ ಎಲ್ಲಾ ಕಲಾವಿದರನ್ನು ಬಿಡುಗಡೆ ಗೊಳಿಸಲಾಗಿದೆ.
"ನಾವು ಕಚೇರಿಗೆ ಏನೂ ತೊಂದರೆ ಮಾಡಿಲ್ಲ. ಮನವಿ ಸಲ್ಲಿಸಲಷ್ಟೇ ಹೋಗಿದ್ದೆವು. ನಗರದ ಎರಡು ಕೇಬಲ್ ಆಪರೇಟರ್ ಗಳು ಜೀ ಟಿವಿ ಪ್ರಸಾರವನ್ನು ಎರಡು ದಿನ ನಿಷೇಧಿಸಲು ಒಪ್ಪಿಕೊಂಡಿವೆ. ಕಳೆದ ಮೂರು ತಿಂಗಳಿನಿಂದ ನಾವು ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಸುಮಾರು ಹತ್ತು ಸಾವಿರ ಕಲಾವಿದರು ಇದನ್ನೇ ನಂಬಿ ಬದುಕುತ್ತಿದ್ದೇವೆ. ನಮ್ಮ ನೋವು ಅವರಿಗೆ ತಿಳಿಯಬೇಕು" ಎಂದು ರವಿ ಕಿರಣ್ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜೀ ಟಿವಿ ಡಬ್ಬಿಂಗ್ ಧಾರವಾಹಿಯನ್ನು ತಕ್ಷಣದಿಂದ ನಿಲ್ಲಿಸಲಾಗುವುದು ಎಂದು ಹೇಳಿಕೆ ನೀಡಿ ನಡೆದ ಘಟನೆಗೆ ಜೀ ಕನ್ನಡ ಚಾನಲ್ ಕ್ಷಮೆ ಯಾಚಿಸಿದೆ.