Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿತ್ರೋದ್ಯಮ ಬಂದ್ : ಫಲ ಕೊಡದ ಕಾಗೋಡು ಕಾಜಿ ನ್ಯಾಯ
*ದಟ್ಸ್ಕನ್ನಡ ಬ್ಯೂರೊ
ಗಾಂಧಿನಗರದಲ್ಲಿ ಮಂಗಳವಾರ ತಾರಾ ಜಾಥಾ. ಕೆಂಪೇಗೌಡ ರಸ್ತೆಯ ಚಿತ್ರಮಂದಿರಗಳ ಬಾಡಿಗೆ ಇಳಿಸಿ, ಸಿನಿಮಾ ಉಳಿಸಿ ಎಂಬುದು ಇದರ ಧ್ಯೇಯವಾಕ್ಯ. ಮೊದಲೇ ಅಂದುಕೊಂಡಿದ್ದಂತೆ ಅಣ್ಣಾವ್ರು ಬೀದಿಗಿಳಿಯುವ ಪ್ರಸಂಗ ಠುಸ್ಸಾಯಿತು. ಅಣ್ಣಾವ್ರು ಇರದಿದ್ದರೂ, ಅವರ ಹೆಂಡತಿ ಹಾಗೂ ಮಕ್ಕಳು ಅಲ್ಲಿದ್ದರು.
ವಜ್ರೇಶ್ವರಿ ಪಾರ್ವತಮ್ಮ ರಾಜ್ಕುಮಾರ್, ಯುವರಾಜ ಶಿವಣ್ಣ, ರಾಘವೇಂದ್ರ ರಾಜ್ಕುಮಾರ್, ಸೂಪರ್ಸ್ಟಾರ್ ಉಪೇಂದ್ರ, ಪೊಲೀಸ್ ಖದರಿನ ಬಿ.ಸಿ.ಪಾಟೀಲ್, ಏಕಾಂಗಿ ರವಿಚಂದ್ರನ್, ಹುಚ್ಚ ಸುದೀಪ್, ಗಿರಿಕನ್ಯೆ ಜಯಮಾಲ, ಅಪ್ಪು ರಕ್ಷಿತ, ಪೋಷಕ ನಟಿ ಆಶಾಲತ, ಮೈ ಡಿಯರ್ ಟೈಗರ್ ಖ್ಯಾತಿಯ ಅಖಿಲ, ಡಕೋಟಾ ಎಕ್ಸ್ಪ್ರೆಸ್ನ ಒಡೆಯ ರಾಕ್ಲೈನ್ ವೆಂಕಟೇಶ್, ವಿಶ್ವಾಮಿತ್ರ ಬಸಂತ ಕುಮಾರ್ ಪಾಟೀಲ್, ಮೀಸೆ ‘ಜೋಡಿ’ದಾರ ಎಸ್.ನಾರಾಯಣ್ ಮೊದಲಾದ ತಾರಾ ದಂಡು. ಇವರನ್ನು ನೋಡಲು ಜನರ ಬಂಡು. ಪೊಲೀಸರ ಲಾಟಿಗಳು ಗಾಳಿಯಲ್ಲಿ ತೇಲಾಡಿದವು. ನೂಕು ನುಗ್ಗಲು ನಿಲ್ಲಲಿಲ್ಲ.
ಬೆಳಗ್ಗೆ 9.30 ಗಂಟೆಗೆ ಮೆಜೆಸ್ಟಿಕ್ನ ಜನತಾ ಬಜಾರ್ನಿಂದ ಶುರುವಾದ ಪ್ರತಿಭಟನೆಯಿಂದ ಗಾಂಧಿನಗರ ಪೂರಾ ಗಿಜಿಗಿಜಿ. ಒಂದೂವರೆ ತಾಸು ಕಾಲ ವಾಹನಗಳು ನಿಂತಲ್ಲೇ ನಿಂತವು. ‘ಚಲನಚಿತ್ರ ಮಂದಿರಗಳ ದುಬಾರಿ ಬಾಡಿಗೆ ಇಳಿಯಬೇಕು’, ‘ನಿರ್ಮಾಪಕರನ್ನು ಕಾಪಾಡಬೇಕು’ ಎಂಬ ಬ್ಯಾನರ್ಗಳು ಸಿನಿಮಾ ಮಂದಿಯ ಕೈಲಿ ಫಳಫಳಿಸುತ್ತಿದ್ದವು.
ಮಧ್ಯಾಹ್ನದ ಹೊತ್ತಿಗೆ ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಮಧ್ಯೆ ಪ್ರವೇಶಿಸಿದರು. ಗಾಂಧಿನಗರದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಪ್ರದರ್ಶಕರು, ಚಿತ್ರಮಂದಿರಗಳ ಮಾಲೀಕರು ಮತ್ತು ಸಿನಿಮಾದ ದಿಗ್ಗಜರನ್ನು ಮಾತಿಗೆ ಕೂರಿಸಿದರು. 2 ತಾಸಿಗೂ ಹೆಚ್ಚು ಕಾಲ ಚರ್ಚೆ ನಡೆಯಿತು.
ಪಾರ್ವತಮ್ಮ ರಾಜ್ಕುಮಾರ್, ರಾಜೇಂದ್ರ ಸಿಂಗ್ ಬಾಬು, ಜಯಮಾಲ, ರವಿಚಂದ್ರನ್, ಬಸಂತ್ಕುಮಾರ್ ಪಾಟೀಲ್, ರಾಘವೇಂದ್ರ ರಾಜ್ಕುಮಾರ್ ಚರ್ಚೆಯಲ್ಲಿ ಬೇಡಿಕೆಗಳನ್ನು ಮುಂದಿಟ್ಟರು. ಆ ಬೇಡಿಕೆಗಳ ಪಟ್ಟಿ ಹೀಗಿದೆ...
- ಆಗಸ್ಟ್ ತಿಂಗಳಿಂದ ನರ್ತಕಿ, ಸಂತೋಷ್, ತ್ರಿವೇಣಿ ಮತ್ತು ಅಪರ್ಣ ಚಿತ್ರಮಂದಿರಗಳ ಬಾಡಿಗೆಯನ್ನು ಪ್ರತಿಶತ 10ರಷ್ಟು ಇಳಿಸಬೇಕು.
- ಕನ್ನಡೇತರ ಚಿತ್ರಗಳನ್ನು ಆಯಾ ರಾಜ್ಯಗಳಲ್ಲಿ ಬಿಡುಗಡೆಯಾದ ಏಳು ವಾರಗಳ ನಂತರವೇ ಬೆಂಗಳೂರಲ್ಲಿ ಬಿಡುಗಡೆ ಮಾಡಬೇಕು.
- ಚಿತ್ರಮಂದಿರಗಳಲ್ಲಿ ಮಾರುವ ತಿಂಡಿ- ತಿನಿಸುಗಳ ಬೆಲೆಯನ್ನು ಇಳಿಸಬೇಕು.
- ಈ ಬೇಡಿಕೆಗಳನ್ನು ಈಡೇರಿಸುವವರೆಗೆ ಚಿತ್ರೋದ್ಯಮದ ಚಟುವಟಿಕೆ ಪೂರಾ ಬಂದ್.
ಈ ಚರ್ಚೆಯಲ್ಲಿ ನಿರ್ಮಾಪಕರ ಮತ್ತು ತಾರಾ ಬಳಗದ ಬಿಗಿ ಬೇಡಿಕೆಗೆ ಪ್ರದರ್ಶಕರು, ವಿತರಕರು ಪೂರ್ಣ ಪ್ರಮಾಣದಲ್ಲಿ ಒಪ್ಪಿಗೆ ಸೂಚಿಸಿಲ್ಲ. ಒಪ್ಪದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ನಿರ್ಮಾಪಕರು ಎಚ್ಚರಿಸಿದ್ದಾರೆ.
ಮಧ್ಯಾಹ್ನ 2 ಗಂಟೆಯ ನಂತರ ಸುಸ್ತಾದ ತಾರಾ ಬಳಗ ಪ್ರತಿಭಟನೆ ನಿಲ್ಲಿಸಿ, ಗಾಂಧೀನಗರದಿಂದ ಮಾಯವಾಯಿತು. ಪ್ರದರ್ಶಕರು ಮತ್ತು ಚಿತ್ರಮಂದಿರಗಳ ಮಾಲೀಕರು ಜಗ್ಗದಿದ್ದಲ್ಲಿ ಬುಧವಾರವೂ ತಾರೆಗಳ ದಂಡು ರಸ್ತೆಗಿಳಿಯಲಿದೆ.
Post your views
ಮುಖಪುಟ / ಸ್ಯಾಂಡಲ್ವುಡ್