Don't Miss!
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- News Heatwave: ಈ ರಾಜ್ಯದ 8 ಜಿಲ್ಲೆಗಳಿಗೆ ಹೀಟ್ವೇವ್ ಎಚ್ಚರಿಕೆ; ಮಳೆ ಸಾಧ್ಯತೆ!
- Technology WhatsApp: ವಾಟ್ಸಾಪ್ಗೆ ಕೆಲವೇ ದಿನಗಳಲ್ಲಿ ಸೇರಲಿವೆ ಬಹುನಿರೀಕ್ಷಿತ ಈ ಫೀಚರ್ಸ್! ಇವುಗಳಿಂದ ಏನೆಲ್ಲಾ ಲಾಭ?
- Finance ಮೊಮೊಸ್ ಮಾರುವ ಶಾಪ್ನಿಂದ ಜಾಬ್ ಆಫರ್ ಸಖತ್ ವೈರಲ್! ವೇತನವೆಷ್ಟು ಗೊತ್ತಾ?
- Lifestyle ಬೆಂಗಳೂರಲ್ಲಿ ಮರ ತಬ್ಬಿಕೊಳ್ಳಲು ₹1,500 ಶುಲ್ಕ..! ಇದೇನಿದು ಕಬ್ಬನ್ ಪಾರ್ಕ್ ನಡಿಗೆ..?
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಜ್ ನೇತೃತ್ವದ ಬಂದ್ ರದ್ದು, ಸಿನಿಮಾ ಪ್ರದರ್ಶನ ಪ್ರಾರಂಭ
ಬೆಂಗಳೂರು : ಸೇವಾ ಶುಲ್ಕ ಹಂಚಿಕೆ ವಿಷಯದಲ್ಲಿ ನಿರ್ಮಾಪಕರು- ಪ್ರದರ್ಶಕರ ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯಕ್ಕೆ ತಾತ್ಕಾಲಿಕ ಪರಿಹಾರ ಸಿಕ್ಕಿರುವ ಕಾರಣ ಗುರುವಾರ (ಜು.17) ನಡೆಯಬೇಕಿದ್ದ ಚಿತ್ರೋದ್ಯಮ ಬಂದ್ ರದ್ದಾಗಿದೆ. ಅಷ್ಟೇ ಅಲ್ಲದೆ, ಸ್ಥಗಿತಗೊಂಡಿದ್ದ ಚಿತ್ರ ಪ್ರದರ್ಶನ ಮತ್ತೆ ಶುರುವಾಗಿದೆ.
ಡಾ.ರಾಜ್ಕುಮಾರ್ ನೇತೃತ್ವದಲ್ಲಿ ಗುರುವಾರ ಪ್ರತಿಭಟನೆ ನಡೆಸುವುದಾಗಿ ನಿರ್ಮಾಪಕರು ಹೇಳಿದ್ದರು. ಆದರೆ, ಬುಧವಾರ (ಜು.16) ವಾರ್ತಾ ಸಚಿವ ಅಲ್ಲಂ ವೀರಭದ್ರಪ್ಪ ಚಿತ್ರೋದ್ಯಮದ ಗಣ್ಯರೊಂದಿಗೆ ಸಭೆ ನಡೆಸಿ, ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಸೇವಾ ಶುಲ್ಕ ವಿಷಯದಲ್ಲಿ ಇನ್ನೂ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ಸೋಮವಾರ (ಜು.21) ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅಲ್ಲಂ ಹೇಳಿದರು.
ಸಭೆಯ ನಂತರ ಸುದ್ದಿಗಾರರ ಜೊತೆ ಮಾತಾಡಿದ ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ಕುಮಾರ್ ಪಾಟೀಲ್, ಸೇವಾ ಶುಲ್ಕ ವಸೂಲಿಯನ್ನು ತಾತ್ಕಾಲಿಕವಾಗಿ ರದ್ದು ಪಡಿಸಿದ್ದಾರೆ. ಮುಂದೆ ಸೇವಾ ಶುಲ್ಕ ಪದ್ಧತಿಯನ್ನೇ ರದ್ದು ಪಡಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ. ಹೀಗಾಗಿ ಪ್ರತಿಭಟನಾ ಪ್ರದರ್ಶನ ಮತ್ತು ಬಹಿರಂಗ ಸಭೆಯನ್ನು ರದ್ದು ಮಾಡಿದೆವು ಎಂದರು.
ಸೇವಾ ಶುಲ್ಕ ಹಾಗೂ ಚಿತ್ರೋದ್ಯಮದ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಉನ್ನತ ಸಮಿತಿಯಾಂದು ರಚಿತವಾಗಿದೆ. ನಿರ್ಮಾಪಕರ ಪರವಾಗಿ ಬಸಂತ್ಕುಮಾರ್ ಪಾಟೀಲ್, ರಾಕ್ಲೈನ್ ವೆಂಕಟೇಶ್, ಜೋ ಸೈಮನ್ ಹಾಗೂ ವಿತರಕರ ಪರವಾಗಿ ಕೆ.ವಿ.ನಾಗೇಶ್ ಕುಮಾರ್, ನಂದರಕುಮಾರ್ ಮತ್ತು ವೆಂಕಟರಮಣ ಸಮಿತಿಯಲ್ಲಿದ್ದಾರೆ. ವಾರದೊಳಗೆ ಈ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ನಿರ್ಮಾಪಕರ ಬೆಂಬಲಕ್ಕೆ ರಾಜ್ಕುಮಾರ್ ?
ಮುಖಪುಟ / ಸ್ಯಾಂಡಲ್ವುಡ್