twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧ : ಚಿತ್ರವಿವಾದಕ್ಕೆ ಸಮರದ ರೂಪ

    By Staff
    |

    ಬೆಂಗಳೂರು : ಪರಭಾಷಾ ಚಿತ್ರಗಳ ಪ್ರದರ್ಶನದ ವಿರುದ್ಧ ಬೀದಿಗಿಳಿದು ಹೋರಾಡುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆ ನ.18ರ ಗುರುವಾರದಿಂದ ತನ್ನ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು , ಕನ್ನಡಕ್ಕಾಗಿ ಪ್ರಾಣಾರ್ಪಣೆಗೂ ಸಿದ್ಧ ಎಂದು ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

    ಗುರುವಾರದೊಳಗೆ ಹೊಸ ಪರಭಾಷಾ ಚಿತ್ರಗಳ ಪ್ರದರ್ಶನ ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. ನ.19ರಂದು ರಾಜ್ಯದ ನಾನಾ ಮೂಲೆಗಳಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಬೆಂಗಳೂರಿಗೆ ಬರಲಿದ್ದು , ಅಂದು ಪರಭಾಷಾ ಚಿತ್ರಗಳ ಪ್ರದರ್ಶನವನ್ನು ಶತಾಯಗತಾಯ ನಿಲ್ಲಿಸಲಾಗುವುದು. ಕನ್ನಡದ ವಿಷಯದಲ್ಲಿ ಯಾವುದೇ ರಾಜಿಗೆ ನಾವು ಸಿದ್ಧವಿಲ್ಲ . ಪ್ರಾಣಾರ್ಪಣೆಗೂ ಸಿದ್ಧರಿದ್ದೇವೆ ಎಂದು ಬುಧವಾರ ಸುದ್ದಿಗಾರರಿಗೆ ನಾರಾಯಣ ಗೌಡ ತಿಳಿಸಿದರು.

    ಸೇನಾ ಸಮರ : ಪರಭಾಷಾ ಚಿತ್ರಗಳ ವಿರುದ್ಧದ ಹೋರಾಟಕ್ಕೆ ಕರುನಾಡ ಸೇನೆ ಕೂಡ ಧುಮುಕಿದ್ದು- ಗುರುವಾರ ಕಾವೇರಿ ಚಿತ್ರಮಂದಿರದ ಎದುರು ಭಾರೀ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಸಾಹಿತಿಗಳಾದ ಮರುಳಸಿದ್ಧಪ್ಪ , ಶೂದ್ರ ಶ್ರೀನಿವಾಸ್‌, ನಾಗತಿಹಳ್ಳಿ ಚಂದ್ರು, ರೈತಸಂಘದ ಕೋಡಿಹಳ್ಳಿ ಚಂದ್ರಶೇಖರ್‌, ಪುಟ್ಟಣ್ಣಯ್ಯ ಸೇರಿದಂತೆ ಸುಮಾರು 2000 ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸುವರು ಎಂದು ಸೇನೆ ತಿಳಿಸಿದೆ.

    ಈ ನಡುವೆ ಯಶ್‌ ಚೋಪ್ರಾರ ವೀರ್‌ ಝಾರಾ ಚಿತ್ರ ಬುಧವಾರ ಬೆಂಗಳೂರಿನ ಇನ್ನೂ ನಾಲ್ಕು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಇದರೊಂದಿಗೆ ಪರಭಾಷಾ ಚಿತ್ರಗಳ ಪ್ರದರ್ಶನ ಕುರಿತ ಒಪ್ಪಂದವನ್ನು ಪ್ರದರ್ಶಕರು ಹಂತಹಂತವಾಗಿ ಉಲ್ಲಂಘಿಸಿದಂತಾಗಿದೆ.

    (ಇನ್ಫೋ ವಾರ್ತೆ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Wednesday, April 24, 2024, 0:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X