Don't Miss!
- News ಬೆಂಗಳೂರು ನಮ್ಮ ಮೆಟ್ರೋ ಬೆಳಗ್ಗೆ 03:35ಕ್ಕೆ ಆರಂಭ: ಏಕೆ? ಕಾರಣ ಇಲ್ಲಿದೆ
- Lifestyle ಎಲೆಕೋಸಿಗೆ ಕೆಮಿಕಲ್ ಮಿಶ್ರಣ ಮಾಡ್ತಾರೆ ಹುಷಾರ್..! ವಿಡಿಯೋ ವೈರಲ್..!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಲ್ಲಾ ಅನ್ನುವ ಮಾತೇ ಇಲ್ಲಾರೀ ಇಲ್ಲಿ ಅಂದ್ರು ದ್ವಾರಕೀಶ್
ಹೀಗೆಂದು ದೀರ್ಘವಾಗಿ ಉಸಿರೆಳೆದುಕೊಂಡರು ಬಿ.ಎಸ್. ದ್ವಾರಕೀಶ್. ಅವರು ಯಾವಾಗ, ಯಾಕೆ ಹೀಗೆಂದರು ಗೊತ್ತೇ? ಕನ್ನಡದಲ್ಲಿ ಕತೆಯಾಧಾರಿತ ಚಿತ್ರಗಳು ಬರುತ್ತಿಲ್ಲ, ಕತೆಯ ಕೊರತೆಯೇ ಎಂದು ದ್ವಾರಕೀಶ್ ರನ್ನು ಕೇಳಲಾಗಿ, ಕನ್ನಡದಲ್ಲಿ ಒಳ್ಳೊಳ್ಳೆಯ ಕಥೆಗಳಿವೆ. ಸಾಕಷ್ಟು ಒಳ್ಳೆಯ ಕಥೆಯಾಧಾರಿತ ಚಿತ್ರಗಳೂ ಬಂದಿವೆ, ಮುಂದೆಯೂ ಬರಬಹುದು.
ಆದರೆ, ಕಾದಂಬರಿಗಳನ್ನು, ಪ್ರಖ್ಯಾತ ಕೃತಿಗಳನ್ನು ಸಿನಿಮಾಕ್ಕೆ ಅಳವಡಿಸುವುದು ಒಂದು ಕಲೆ. ಅದು ಎಲ್ಲರಿಂದಲೂ ಸಾಧ್ಯವಾಗುವುದಿಲ್ಲ. ನನ್ನಿಂದಂತೂ ಸಾಧ್ಯವಾಗಿಲ್ಲ. ನಾನು ಒಳ್ಳೆಯ ಕೃತಿಗಳನ್ನು ಇಟ್ಟು ಸಿನಿಮಾ ಮಾಡಲಿಲ್ಲ ಎಂಬ ಕೊರಗು ಆಗಾಗ ನನಗೂ ಕಾಡುತ್ತದೆ. ಆದರೆ ಒಳ್ಳೊಳ್ಳೆಯ ಸಿನಿಮಾ ಮಾಡಿದ್ದೇನೆ ಎಂಬ ತೃಪ್ತಿಯಂತೂ ಇದ್ದೇ ಇದೆ" ಎಂದಿದ್ದಾರೆ.
ಸಿನಿಮಾ ರಂಗದಲ್ಲಿ ಎಲ್ಲವನ್ನೂ ನೋಡಿದ್ದಾರೆ, ಮಾಡಿದ್ದಾರೆ ಈ ನಮ್ಮ ದ್ವಾರಕೀಶ್. ಅವರ ಮಾತನ್ನು 'ಅಲ್ಲ' ಎನ್ನುವವರು ಯಾರಿದ್ದಾರೆ? ಹೇಳಿದರೂ ಅದಕ್ಕೆ ಅವರೇನು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಯಾವುದೂ ಅಸಾಧ್ಯವಲ್ಲ. ಸಿನಿಮಾ ರಂಗದಲ್ಲಿ ಎಲ್ಲವೂ ಸಾದ್ಯ ಎಂಬುದು ಅವರ ಮಾತು. ಆಗದಿರುವವರ ಬಗ್ಗೆ ಅವರು ಏನನ್ನೂ ಹೇಳಿಲ್ಲ, ಹೇಳುವುದೂ ಇಲ್ಲ...! (ಒನ್ ಇಂಡಿಯಾ ಕನ್ನಡ)