Don't Miss!
- Technology ಅಗ್ಗದ ದರದಲ್ಲಿ 5G ಫೋನ್ ಖರೀದಿಸಬೇಕೆ?..ಈ ಆಫರ್ ಮಿಸ್ ಮಾಡ್ಕೋಬೇಡಿ!
- Automobiles Kia: ಬಹುನಿರೀಕ್ಷಿತ ಕಿಯಾ ಕ್ಲಾವಿಸ್ ಮೈಕ್ರೋ ಎಸ್ಯುವಿ ಶೀಘ್ರದಲ್ಲೇ ಬಿಡಗಡೆ
- News ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳ ಜನರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ-ಇವರ ಬೇಡಿಕೆ ಏನು ಗೊತ್ತಾ?
- Finance Bullet train: ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್ಗೆ ಶೀಘ್ರ ಚಾಲನೆ, ಗಂಟೆಗೆ 250 ವೇಗ
- Lifestyle ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
- Sports India's Squad For T20 World Cup: ಟಿ20 ವಿಶ್ವಕಪ್ಗೆ ಸಂಭಾವ್ಯ 20 ಸದಸ್ಯರ ಭಾರತ ತಂಡ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುಂಬೈ ನಡುಗುತ್ತಿದ್ದಾಗ ಶಾರುಕ್ ಮೋಜುಮಸ್ತಿಯಲ್ಲಿ ನಗ್ತಿದ್ದ!
ಚಿತ್ರನಟಿ ಕತ್ರಿನಾ ಕೈಫ್ಳ ಹುಟ್ಟುಹಬ್ಬ ಆಚರಿಸಲು ಶುಕ್ರವಾರ ಖಾನ್ ಪಾರ್ಟಿ ಆಯೋಜಿಸಿದ್ದರು. ಚಿತ್ರರಂಗದ ಗಣ್ಯರಾದ ಹೃತಿಕ್ ರೋಶನ್, ಫರ್ಹಾನ್ ಅಖ್ತರ್, ಅರ್ಜುನ್ ರಾಮ್ಪಾಲ್, ಚಂಕಿ ಪಾಂಡೆ, ಅಜಯ್ ದೇವಲ್, ಕತ್ರಿನಾ ಕೈಫ್, ಕರಣ್ ಜೋಹರ್ ಮೊದಲಾದವರು ಭಾಗವಹಿಸಿದ್ದರು ಎಂದು ಪತ್ರಿಕೆ ಹೇಳಿದೆ. ಈ ಅತಿರಥ ಮಹಾರಥರೆಲ್ಲ 'ರೋಮ್ ಹತ್ತಿ ಉರಿಯುತ್ತಿದ್ದಾಗ ಪಿಟೀಲು ಕೊಯ್ಯುತ್ತಿದ್ದೇಕೆ' ಎಂದು ಅಭಿಮಾನಿಗಳೂ ತರಾಟೆಗೆ ತೆಗೆದುಕೊಂಡಿದ್ದಾರೆ.
ರಜತ ಪರದೆಯಲ್ಲಿ ನಾಯಕನಾಗಿ ಮೆರೆಯುವ ಖಾನ್ ನಿಜ ಜೀವನದಲ್ಲಿ ಖಳನಾಯಕರಾಗಿದ್ದಾರೆ ಎಂಬುದನ್ನು ಈ ಘಟನೆ ಬಿಂಬಿಸುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ತೀಕ್ಷಣವಾಗಿ ಹೇಳಿದೆ.
ಕೆಲವು ಪ್ರಮುಖ ಚಿತ್ರನಟರು ತಮ್ಮ ಹುಟ್ಟುಹಬ್ಬ ಮತ್ತು ಗುರುಪೂರ್ಣಿಮೆ ಆಚರಣೆಯನ್ನು ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದರು. ಚಿತ್ರನಟಿ ಐಶ್ವರ್ಯಾ ರೈ ಫ್ರೆಂಚ್ ಸರ್ಕಾರ ನೀಡಲಿದ್ದ ಗೌರವವನ್ನು ಸ್ವೀಕರಿಸಲು ಬಾಂಬ್ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ನಿರಾಕರಿಸಿದ್ದರು. ಆದರೆ ಇವನೊಬ್ಬ ಶಾರುಕ್ ಖಾನ್ಗೆ ಪಾರ್ಟಿ ರದ್ದುಪಡಿಸಬೇಕೆಂಬ ಮನಸ್ಸು ಬರಲಿಲ್ಲ ಎಂದು ಪತ್ರಿಕೆ ಮೂಲಕ ಶಿವಸೇನೆ ತೀವ್ರ ಅಸಮಾಧಾನ ಹೊರಹಾಕಿದೆ.