twitter
    For Quick Alerts
    ALLOW NOTIFICATIONS  
    For Daily Alerts

    ನಾಗತಿಹಳ್ಳಿ ಚಂದ್ರಶೇಖರ್‌ಗೆ ಎಂಎನ್‌ಸಿಗಳಿಂದ ಬೆದರಿಕೆ

    By Staff
    |

    ನಿರ್ಮಾಣದ ಹಂತದಲ್ಲಿರುವ ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಚಿತ್ರ ಬಹುರಾಷ್ಟ್ರೀಯ ಕಂಪನಿಗಳ ನಿದ್ದೆ ಕೆಡಿಸಿದೆ.

    ಅನೇಕ ಜೈವಿಕ ತಂತ್ರಜ್ಞಾನ(ಬಯೋಟೆಕ್‌) ಕಂಪನಿಗಳು ಚಿತ್ರ ನಿರ್ಮಾಣ ಸ್ಥಗಿತಗೊಳಿಸಬೇಕೆಂದು ನಾಗತಿಹಳ್ಳಿ ಅವರಿಗೆ ಬೆದರಿಕೆ ಇ-ಮೇಲ್‌ಗಳನ್ನು ರವಾನಿಸಿವೆ. ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲು ಅವಕಾಶ ನೀಡಲಾರೆವು ಎಂದು ಕೆಲವು ಮೇಲ್‌ಗಳಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ.

    ನವದೆಹಲಿಯ ಮಾನವ ಹಕ್ಕುಗಳ ಆಯೋಗದ ದೇವೇಂದ್ರ ಶರ್ಮಾ ಅವರೊಂದಿಗೆ ಮಾತುಕತೆ ನಡೆಸಿ, ನಮ್ಮ ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಚಿತ್ರದ ಚಿತ್ರಕಥೆ ಸಿದ್ಧಗೊಳಿಸಲಾಗಿದೆ. ಏನೇ ಒತ್ತಡ ಬಂದರೂ ಚಿತ್ರ ಪೂರ್ಣಗೊಳಿಸುತ್ತೇನೆ ಎನ್ನುತ್ತಾರೆ ನಾಗತಿಹಳ್ಳಿ.

    ಬಹುರಾಷ್ಟ್ರೀಯ ಕಂಪನಿಗಳ ಬಣ್ಣ ಸಿನಿಮಾದಲ್ಲಿ ಬಯಲಾಗಲಿದೆ. ಈ ಆತಂಕದಿಂದಲೇ ಬೆದರಿಕೆ ಮೇಲ್‌ಗಳು ಬಂದಿವೆ. ಇಂತಹ ಬೆದರಿಕೆಗಳಿಗೆ ನಾನು ಹೆದರುವುದಿಲ್ಲ. ನನ್ನ ಹಾಗೂ ನಿರ್ಮಾಪಕರ ಯೋಜನೆಗಳ ಪ್ರಕಾರ ಚಿತ್ರ ಮುಂದುವರಿಯಲಿದೆ. ಆದರೆ ಬೆದರಿಕೆ ಹಾಕಿದವರಿಗೆ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದ್ದೇನೆ ಎಂದು ಅವರು ಘೋಷಿಸಿದ್ದಾರೆ.

    Tuesday, April 23, 2024, 13:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X