Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗುರುವಾಯೂರಪ್ಪನೇ ಕಾಯೋ...ಜೇಸುದಾಸ್ ಎಂಬ ಕನಕದಾಸನಿಗೆ ಕೃಷ್ಣನ ಕಾಣೋ ತವಕ! ಆದರೆ?
ಕೇರಳದಲ್ಲಿ ಒಂದಲ್ಲ ಒಂದು ವಿವಾದ ಇದ್ದದ್ದೇ. ನಟಿ ಜಯಮಾಲಾ, ಅಯ್ಯಪ್ಪನ ಪಾದಸ್ಪರ್ಶ ಮಾಡಿದರೆಂಬ ವಿವಾದದ ಬಿಸಿತಗ್ಗುವ ಮುನ್ನವೇ, ಯೇಸುದಾಸ್ರ ಕೃಷ್ಣ ದರ್ಶನ ವಿವಾದ ಹುಟ್ಟಿಕೊಂಡಿದೆ!
ಗುರುವಾಯೂರಿನ ಶ್ರೀ ಕೃಷ್ಣ ದೇಗುಲ ಪ್ರವೇಶಿಸುವುದು ಖ್ಯಾತ ಹಿನ್ನೆಲೆ ಗಾಯಕ ಜೇಸುದಾಸ್ರ ಬಯಕೆ. ಅಲ್ಲಿ ಗಾನಸುಧೆ ಹರಿಸಿ, ಕೃಷ್ಣನ ಆರಾಧಿಸುವುದು ಅವರ ಉದ್ದೇಶ. ಆದರೆ ಅವರು ಕ್ರೆೃಸ್ತ ಧರ್ಮಕ್ಕೆ ಸೇರಿದ್ದಾರೆಂದು, ದೇಗುಲ ಪ್ರವೇಶಕ್ಕೆ ಅಡ್ಡಿ ಆತಂಕಗಳು ನೂರಾರು.
ಜೇಸುದಾಸ್ ದೇಗುಲ ಪ್ರವೇಶ ಈಗ ಹೊಸ ವಿವಾದವಾಗಿ, ದೇಶದೆಲ್ಲೆಡೆ ಪ್ರತಿಧ್ವನಿಸಿದೆ. ಜೇಸುದಾಸ್ಗೆ ಗುರುವಾಯೂರಪ್ಪನ ಬಗ್ಗೆ ಭಕ್ತಿ ಇದೆ. ಹೀಗೆಂದು ಹಿಂದೂ ದೇಗುಲಕ್ಕೆ ಅನ್ಯಧರ್ಮದವರ ಸೇರಿಸುವುದು ಬೇಡ ಎನ್ನುವುದು ಕೆಲವರ ಅಭಿಪ್ರಾಯ. ಜೇಸುದಾಸ್ಗೆ ಪ್ರವೇಶ ನೀಡಬೇಕು ಎಂಬುದು ಇನ್ನೊಂದು ಬಣದ ವಾದ.
‘ಕೃಷ್ಣನ ಪರಮ ಭಕ್ತರಾಗಿರುವ ಜೇಸುದಾಸ್ಗೆ ದೇಗುಲ ಪ್ರವೇಶಿಸಲು ಅವಕಾಶ ನೀಡಿ’ ಎಂದು ಕೇರಳ ದೇವಸ್ವಂ ಸಚಿವ ಜಿ.ಸುಧಾಕರನ್, ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇರಳದ ಹಿಂದೂ ಸಂಘಟನೆಯಾಂದು ಕಿಡಿಕಾರಿದೆ. ಆಡಳಿತ ಮಂಡಳಿ ಮೇಲೆ ಒತ್ತಡ ಹಾಕುವ ಸಚಿವರ ವರ್ತನೆ ಖಂಡನೀಯ. ಅಲ್ಲದೇ ಒಬ್ಬ ವ್ಯಕ್ತಿಗಾಗಿ ದೇವಸ್ಥಾನದ ನೀತಿ ನಿಯಮಗಳನ್ನ ಗಾಳಿಗೆ ತೂರಬೇಕೇ ಎಂದು ಸಂಘಟನೆ ಪ್ರಶ್ನಿಸಿದೆ.
ಕಳೆದ ಮೂರು ವರ್ಷಗಳ ಹಿಂದೆ ಗುರುವಾಯೂರು ದೇವಸ್ಥಾನ ಪ್ರವೇಶಿಸದಂತೆ ಜೇಸುದಾಸ್ರನ್ನು ತಡೆಯಲಾಗಿತ್ತು. ಹಿಂದೂ ದೇವರುಗಳ ಮೇಲೆ ಜೇಸುದಾಸ್ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರ ಹಾಡುಗಳನ್ನು ಕೇಳುವಾಗ ಬಾರದ ಮಡಿ, ಅವರ ಪ್ರವೇಶದ ವಿಚಾರ ಬಂದಾಗ ಅಡ್ಡ ಬರುವುದೇ ಎಂಬುದು ಕೆಲವರ ಪ್ರಶ್ನೆ. ಈ ಬಗ್ಗೆ ನೀವೇನಂತೀರಾ?