twitter
    For Quick Alerts
    ALLOW NOTIFICATIONS  
    For Daily Alerts

    ಪುನೀತ್‌ ನಿರಪರಾಧಿ -ಪೊಲೀಸ್‌

    By Staff
    |

    ಮೈಸೂರು : ಮೈಸೂರು ದಸರಾ ಸಂದರ್ಭದಲ್ಲಿ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ಅವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿಲ್ಲ ಎನ್ನುವ ವಿಷಯ ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸ್‌ ಆಯುಕ್ತ ಬಿಪಿನ್‌ ಗೋಪಾಲಕೃಷ್ಣ ತಿಳಿಸಿದ್ದಾರೆ.

    ಜಂಬೂ ಸವಾರಿ ಸಂದರ್ಭದಲ್ಲಿ ಪುನೀತ್‌ ಹಾಗೂ ಪತ್ರಕರ್ತರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು . ಈ ಸಂದರ್ಭದಲ್ಲಿ ಖಾಸಗಿ ವಾಹಿನಿಯಾಂದರ ವರದಿಗಾರ ಸಂತೋಷ್‌ಕುಮಾರ್‌ ನಡುಬೆಟ್ಟ ಎನ್ನುವವರ ಮೇಲೆ ಪುನೀತ್‌ ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿತ್ತು . ಈ ಕುರಿತು ತನಿಖೆ ನಡೆದಿದ್ದು , ಪುನೀತ್‌ ಹಲ್ಲೆ ನಡೆಸಿರುವ ವಿಷಯ ಸತ್ಯಕ್ಕೆ ದೂರವಾದುದು ಎಂದು ಬಿಪಿನ್‌ ಗೋಪಾಲಕೃಷ್ಣ ತಮ್ಮ ತನಿಖಾ ವರದಿಯಲ್ಲಿ ತಿಳಿಸಿದ್ದಾರೆ.

    ಆದರೆ, ನಾಗರಾಜ ಎಂಬಾತ ಸಂತೋಷ್‌ ಮೇಲೆ ಹಲ್ಲೆ ನಡೆಸಿರುವುದು ಸಾಕ್ಷಿಗಳಿಂದ ದೃಢಪಟ್ಟಿದೆ. ನಾಗರಾಜನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

    (ಇನ್ಫೋ ವಾರ್ತೆ)

    ಪೂರಕ ಓದಿಗೆ-
    ಯಾರಿಗೂ ನಾನು ಹೊಡೆದಿಲ ್ಲ-ಪುನೀತ್‌

    ಮುಖಪುಟ / ಸ್ಯಾಂಡಲ್‌ವುಡ್‌

    Tuesday, April 23, 2024, 13:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X