ಹೊಗೇನಕಲ್ ಜಲಪಾತಕ್ಕೆ ಧುಮುಕಿದ ತಮಿಳು ನಟಿ
ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿರುವ ಹೊಗೇನಕಲ್ ಜಲಪಾತಕ್ಕೆ ತಮಿಳು ನಟಿ ತನ್ಶಿಕಾ ಧುಮುಕಿದ್ದಾರೆ. ಆಕೆ ಧುಮುಕಲು ಇದೇ ಜಲಪಾತ ಬೇಕಾಗಿತ್ತ? ಬೇರಾವ ಜಾಗ ಸಿಗಲಿಲ್ಲವೇ? ಏನು ಮಾಡೋಣ ಗುರು ನಿರ್ದೇಶಕರ ಆಣತಿಯಂತೆ ಆಕೆ ಜಂಪ್ ಹೊಡೆದಿದ್ದಾರೆ.
ಈ ಸಾಹಸ ಮಾಡಿರುವ ದಕ್ಷಿಣ ಭಾರತದ ತಾರೆಗಳಲ್ಲಿ ತನ್ಶಿಕಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ತಮಿಳಿನ 'ಅರವನ್' ಚಿತ್ರಕ್ಕಾಗಿ ನಡೆದ ಸಾಹಸ ಸನ್ನಿವೇಶವಿದು. ಯಾವುದೇ ಡ್ಯೂಪ್ ಕಲಾವಿದರಿಲ್ಲದೆ ತನ್ಶಿಕಾ ಈ ಸಾಹಸ ಮಾಡಿದ್ದಾಗಿ ತಿಳಿಸಿದ್ದಾರೆ.
'ಅರವನ್' ಎಂಬ ಚಿತ್ರ 18ನೇ ಶತಮಾನದ ಕತೆಯನ್ನು ಹೇಳುತ್ತದೆ. ಸಾಮಾನ್ಯನೊಬ್ಬನ ಅಸಮಾನ್ಯ ಕತೆ ಇದಂತೆ. 'ಅಂಗಡಿ ತೇರು' ಎಂಬ ಚಿತ್ರದನ್ನು ನಿರ್ದೇಶಿಸಿದ್ದ ವಸಂತಬಾಲನ್ ಆಕ್ಷನ್ ಕಟ್ ಹೇಳಿರುವ ಚಿತ್ರ. (ಏಜೆನ್ಸೀಸ್)
More from Filmibeat
English summary
Actress Thanshika says that she has jumped from the top of Hogenakkal hills with out any dupe for Aravaan movie.


Click it and Unblock the Notifications











