Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೆಎಫ್ಸಿಸಿ ಎದಿರು ನಡೆಯದ ದಯಾಳ್ 'ಸರ್ಕಸ್'
ಎಸ್.ಮಹೇಂದರ್ ಅವರ ಬಳಿ ದಯಾಳ್ ಸಹಾಯಕರಾಗಿ ಕೆಲಸ ಮಾಡುತ್ತಿದ್ದಾಗ ಈ ಕಥೆಯನ್ನು ಮಹೇಂದರ್ ಬರೆದಿದ್ದರು. ಅದೇ ಕಥೆಯನ್ನು ಈಗ ದಯಾಳ್ ಕದ್ದಿರುವುದು ಸಾಬೀತಾದ ಕಾರಣ ಮಹೇಂದರ್ ಅವರಿಗೆ ಮನ್ನಣೆ ನೀಡಿ ಅವರಿಗೆ ರು.1.5 ಲಕ್ಷ ಪರಿಹಾರ ಧನ ಕೊಡಬೇಕು ಎಂದು ಕೆಎಫ್ ಸಿಸಿ ಆದೇಶಿಸಿದೆ. ಈ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಕೆಎಫ್ ಸಿಸಿಗೂ ರು.25000 ದಂಡ ಕಟ್ಟುವಂತೆ ದಯಾಳ್ ಅವರಿಗೆ ತಾಕೀತು ಮಾಡಿದೆ. ಒಟ್ಟಿನಲ್ಲಿ ಕೆಎಫ್ ಸಿಸಿ ಮಧ್ಯಸ್ಥಿಕೆಯಿಂದ ನಿರ್ದೇಶಕ ಮಹೇಂದರ್ ಗೆ ನ್ಯಾಯ ದೊರಕಿದೆ.
ಈ ಕಥೆಯನ್ನು ಸ್ವತಃ ತಾವೇ ಹತ್ತು ವರ್ಷಗಳ ಹಿಂದೆ ರಚಿಸಿರುವುದಾಗಿ ದಯಾಳ್ ವಾದಿಸಿದ್ದರು. ಆದರೆ ಮಹೇಂದರ್ ಈ ಕಥೆಯನ್ನು ಮತ್ತೊಬ್ಬ ನಿರ್ಮಾಪಕ ರಮೇಶ್ ಯಾದವ್ ಸೇರಿದಂತೆ ಹಲವಾರು ನಿರ್ಮಾಪಕರ ಬಳಿ ಈ ಮುಂಚೆಯೇ ಹೇಳಿಕೊಂಡಿದ್ದರು. ಆದರೆ ದಯಾಳ್ ಇದನ್ನು ಸುತಾರಾಂ ಒಪ್ಪುವ ಸ್ಥಿತಿಯಲ್ಲಿ ಇರಲಿಲ್ಲ. ಕಥೆಯ ಬಗ್ಗೆ ಮಹೇಂದರ್ ಪ್ರಸ್ತಾಪಿಸಿದ್ದಾಗಲೂ ದಯಾಳ್ ಕ್ಯಾರೆ ಅಂದಿರಲಿಲ್ಲ. ಇದರಿಂದ ರೋಸಿ ಹೋದ ಮಹೇಂದರ್ ಕಡೆಗೆ ಕೆಎಫ್ ಸಿಸಿ ಬಳಿ ದೂರು ದಾಖಲಿಸಿದರು. ಕೆಎಫ್ ಸಿಸಿ ವಿಚಾರಣೆ ನಡೆಸಿದಾಗ ದಯಾಳ್ ಕಥೆ ಕದ್ದಿರುವುದು ಸಾಬೀತಾಗಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)