Don't Miss!
- Automobiles ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- Lifestyle ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- News ಮೀಸಲಾತಿ ಅಸ್ತ್ರ ಪ್ರಯೋಗಿಸಿದ ಮೋದಿ; ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ: ಸಿದ್ದರಾಮಯ್ಯ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮುದುಕರ ಜತೆ ಸರಸವಿದೇನೆ ರಾಧಿಕಾ?
"ಗಣೇಶ್ ಕಾಸರಗೋಡು ಈಗಲೂ ಫೀಲ್ಡ್ನಲ್ಲಿ ಇದ್ದಾರಾ? ಅವರು ಪ್ರೆಸ್ಮೀಟ್ಗಳಿಗೆ ಈಗಲೂ ಬರ್ತಿದ್ದಾರಾ?" ಎಂದು ಕೇಳಿದ್ದು ಬೇರೆ ಯಾರೂ ಅಲ್ಲ; ಒಂದು ಕಾಲದ ನಟಿ ರಾಧಿಕಾ. ಕೇಳಿಸಿಕೊಂಡವರು 'ಉದಯವಾಣಿ'ಯ ಕಿರಿಯ ಮಿತ್ರ ರವಿಪ್ರಕಾಶ್ ರೈ. ವರದಿ ಒಪ್ಪಿಸಿ ನನ್ನ ಮುಖವನ್ನೇ ದಿಟ್ಟಿಸಿದರು ರೈ.
ನಾನೆಂದೆ: ನೆನಪಿದೆಯಾ ಆಕೆಗೆ? ಮರೆಯುವುದು ಹೇಗೆ ಸಾಧ್ಯ? ರಾಧಿಕಾ, ಮತ್ತು ಆಕೆಯ ಹೆತ್ತವರ ಬಗ್ಗೆ ಒಂದು ಪುಟ್ಟ ಸುದ್ದಿ ಬರೆದಿದ್ದೆ. ಇದು ಎಂಟು ವರ್ಷಗಳ ಹಿಂದಿನ ಮಾತು. ಆಗ ರಾಧಿಕಾ 'ಮಣಿ' ಚಿತ್ರದ ಶೂಟಿಂಗ್ಗಾಗಿ ಕಾಸರಗೋಡಿಗೆ ಹೋಗಿದ್ದಳು. ಅದು ಯೋಗರಾಜ್ ಭಟ್ಟರ ಮೊದಲ ಚಿತ್ರ. ಕರಿಸುಬ್ಬು ನಿರ್ಮಿಸಿದ ಈ ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ನಡೆದದ್ದು ಕರಾವಳಿ ತೀರದಲ್ಲಿ..." ಇಷ್ಟು ಹೇಳುವಷ್ಟರಲ್ಲಿ ರವಿಪ್ರಕಾಶ್ ರೈ ಆಸಕ್ತಿ ಕಳೆದುಕೊಂಡಿದ್ದರು.
ನಾನು ನೆನಪಿನಾಳಕ್ಕೆ ಇಳಿದು ಹೋದೆ. ಎಂಟು ವರ್ಷಗಳ ಹಿಂದೆ ಪ್ರಕಟವಾಗಿದ್ದ ರಾಧಿಕಾ ಬಗೆಗಿನ ಸುದ್ದಿಯ ಸಾರ ಹೀಗಿದೆ: ಛೀ ....ಥೂ...! ಒಮ್ಮೆ ಕ್ಯಾಕರಿಸಿ 'ಥೂ' ಎಂದರು ದೇವರಾಜ್. ಪಕ್ಕವಾದ್ಯ ಎಂಬಂತೆ ಅವರ ಧರ್ಮಪತ್ನಿ ಸುರೇಖಾ ಶಕ್ತಿಮೀರಿ 'ಛೀ' ಎಂದರು. ಈ ದೇವರಾಜ್ ಮತ್ತು ಸುರೇಖಾ ದಂಪತಿಗಳು ಬೇರಾರು ಅಲ್ಲ; ಈಗ ಕನ್ನಡ ಚಿತ್ರರಂಗದಲ್ಲಿ ನಂ.1 ಸ್ಥಾನದಲ್ಲಿರುವ ಕಲಾವಿದೆ ರಾಧಿಕಾ ಅವರ ಹೆತ್ತವರು.