Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಲಹರಿ ವೇಲು ಕ್ಷಮೆ ಕೇಳಿದ ಸಾಹಿತಿ ನಾಗೇಂದ್ರ ಪ್ರಸಾದ್
ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಅವರು ಬರೆದಿರುವ ಸಿ ಅಶ್ವಥ್ ಕಂಠಸಿರಿಯಲ್ಲಿ ಮೂಡಿಬಂದ "ಹಿಂದೆ ಹೇಗೆ ಚಿಮ್ಮುತ್ತಿತ್ತು ಕಣ್ಣ ತುಂಬಾ ಪ್ರೀತಿ, ಈಗ ಯಾಕೆ ಜ್ವಲಿಸುತಿದೆ ಏನೋ ಶಂಕೆ ಭೀತಿ" ಹಾಡನ್ನು ನಿರ್ಮಾಪಕ ಕಮ್ ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್ ತಮ್ಮ 'ವಿನಾಯಕ ಗೆಳೆಯರ' ಬಳಗ ಚಿತ್ರದಲ್ಲಿ ಅಳವಡಿಸಿಕೊಂಡಿದ್ದರು. ಲಹರಿ ರೆಕಾರ್ಡಿಂಗ್ ಕಂಪೆನಿ ಅನುಮತಿ ಇಲ್ಲದೆ ಹಾಡನ್ನು ಅಳವಡಿಸಿದ್ದಕಾಗಿ ಲಹರಿ ಸಂಸ್ಥೆಯ ಕ್ಷಮೆ ಯಾಚಿಸಿದ್ದಾರೆ.
ಈ ಲೈಟ್ ಮ್ಯುಸಿಕ್ ಹಾಡನ್ನು ಸಂದರ್ಭಕ್ಕೆ ಅನುಗುಣವಾಗಿ ಚಿತ್ರದಲ್ಲಿ ಬಳಸಿಕೊಂಡಿದ್ದೆ. ನಾನು ಆಶ್ವಥ್ ಅವರ ದೊಡ್ಡ ಅಭಿಮಾನಿ. ಈ ಹಾಡಿನ ರೈಟ್ಸ್ ಲಹರಿ ಸಂಸ್ಥೆಗೆ ಒಳಪಟ್ಟಿದ್ದು ಎನ್ನುವುದು ತಿಳಿಯದೇ ಚಿತ್ರದಲ್ಲಿ ಬಳಸಿಕೊಂಡೆ ಅದಕ್ಕಾಗಿ ಲಹರಿ ಸಂಸ್ಥೆ ಮಾಲೀಕ ವೇಲು ಬಳಿ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ನಾಗೇಂದ್ರ ಪ್ರಸಾದ್ ಅಪಾಲಜಿ ಪತ್ರ ಕಳುಹಿಸಿದ್ದಾರೆ.
ತಕ್ಷಣ ದಿಂದಲೇ ಚಿತ್ರದಲ್ಲಿ ಈ ಹಾಡಿಗಾಗಿ ಲಹರಿ ಸಂಸ್ಥೆಗೆ ಕ್ರೆಡಿಟ್ ನೀಡುತ್ತೇನೆ. ವಿನಾಯಕ ಗೆಳೆಯರ ಬಳಗ ರಾಜ್ಯಾದ್ಯಂತ 35 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದ ಗಳಿಕೆಯಿಂದ ಸಂತೋಷವಾಗಿದೆ.
ಒಂದು ಒಳ್ಳೆ ಚಿತ್ರ ನೀಡಿದ ಸಂತೃಪ್ತಿ ನಮ್ಮ ಚಿತ್ರತಂಡಕ್ಕೆ ಇದೆ. ಚಿತ್ರ ಇನ್ನೂ ಉತ್ತಮ ಪ್ರದರ್ಶನ ಕಾಣುವ ಆಶಾಭಾವ ಹೊಂದಿದ್ದೇನೆ ಎಂದು ನಾಗೇಂದ್ರ ಪ್ರಸಾದ್ ಸಂತೋಷ ವ್ಯಕ್ತ ಪಡಿಸಿದ್ದಾರೆ.