ಮದನ್ ಪಟೇಲ್‌ಗೆ ವಿಹಿಂಪದಿಂದ ಬೆದರಿಕೆ ಕರೆ

By Rajendra

ಮದನ್ ಪಟೇಲ್ ಅವರ ಮಹತ್ವಾಕಾಂಕ್ಷಿ 'ಸತ್ಯಾನಂದ' ಚಿತ್ರಕ್ಕೆ ಒಂದಿಲ್ಲೊಂದು ವಿಘ್ನಗಳು ಎದುರಾಗುತ್ತಲೇ ಇವೆ. ಈ ರೀತಿ ಸಮಸ್ಯೆಗಳು ಬಂದಾಗಲೆಲ್ಲಾ ಮದನ್ ಪತ್ರಿಕಾಗೋಷ್ಠಿ ಕರೆಯುವುದು ನೋಡಿ ನಮ್ಮ ಚಿತ್ರಕ್ಕೆ ಹಿಂಗಾಗಿದೆ ಎಂದು ಹೇಳುವುದು ಮಾಮೂಲಾಗಿದೆ.

ಸ್ವಾಮಿ ನಿತ್ಯಾನಂದ ಬೆಂಬಲಿಗರಿಂದ ತಮ್ಮ ಚಿತ್ರಕ್ಕೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಮದನ್ ಒಮ್ಮೆ ಆರೋಪಿಸಿದ್ದರು. ಈಗ 'ಸತ್ಯಾನಂದ' ಚಿತ್ರೀಕರಣ ನಿಲ್ಲಿಸುವಂತೆ ವಿಶ್ವ ಹಿಂದೂ ಪರಿಷತ್ ಹಾಗೂ ಭಗತ್‌ಸಿಂಗ್ ಸೇನೆ ಬೆದರಿಕೆ ಒಡ್ಡಿದೆ ಎಂದು ಮದನ್ ಆರೋಪಿಸಿದ್ದಾರೆ.

'ಸತ್ಯಾನಂದ' ಚಿತ್ರವನ್ನು ನಿಲ್ಲಿಸುವಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕೇಂದ್ರ ವಾರ್ತಾ ಹಾಗೂ ಪ್ರಚಾರ ಇಲಾಖೆಗೂ ವಿಹಿಂಪ ಪತ್ರ ಬರೆದಿದೆ. ನಮ್ಮ ಚಿತ್ರಕ್ಕೆ ಇನ್ನೂ ಸೆನ್ಸಾರ್ ಪೂರ್ಣವಾಗಿಲ್ಲ. ಅಷ್ಟರಲ್ಲಾಗಲೆ ಸತ್ಯಾನಂದ ಚಿತ್ರಕ್ಕೆ ತಪ್ಪು ಪ್ರಚಾರ ನೀಡಲಾಗುತ್ತಿದೆ. ನಿತ್ಯಾನಂದ ಬೆಂಬಲಿಗರು ತಮಗೆ ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದಿದ್ದಾರೆ ಮದನ್. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actor, producer, music director of Kannada films Madan Patel has received threatening calls from Vishwa Hindu Parishat on his film 'Satyananda' focusing on the Swami Nityananda. Threatening calls coming in support of Swami Nityananda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X