ನಟ ಸಂಜಯ್ ದತ್ ಗೆ ಜಾಮೀನು : ಸುಪ್ರೀಂ ಕೋರ್ಟ್
ನವದೆಹಲಿ, ಆಗಸ್ಟ್ 20 : 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಿಕ್ಷೆಗೊಳಗಾಗಿ ಜೈಲಲ್ಲಿರುವ ಬಾಲಿವುಡ್ ನಟ ಸಂಜಯ್ ದತ್ ಗೆ ಜಾಮೀನು ದೊರೆತಿದೆ.
ಸೋಮವಾರ ಸುಪ್ರೀಂ ಕೋರ್ಟ್ ಸಂಜಯ್ ದತ್ ಗೆ ಜಾಮೀನು ನೀಡಿದ್ದು, ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಮುಂಬೈನ ಟಾಡಾ ವಿಶೇಷ ನ್ಯಾಯಾಲಯದಿಂದ 6ವರ್ಷ ಜೈಲು ಶಿಕ್ಷೆಗೆ ಸಂಜಯ್ ದತ್ ಗುರಿಯಾಗಿದ್ದರು. ಅವರ ಜಾಮೀನು ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 10ರಂದು ಆಗಸ್ಟ್ 20ಕ್ಕೆ ಮುಂದೂಡಿತ್ತು. ಇಂದು ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್, ಸಂಜಯ್ ದತ್ ಗೆ ಮಧ್ಯಕಾಲದ ಜಾಮೀನು ನೀಡಿದ್ದಾರೆ.
(ಏಜನ್ಸೀಸ್)
ಪೂರಕ ಓದಿಗೆ :
ಜೈಲು ತಪ್ಪಿಸಿ :ಸುಪ್ರೀಂಕೋರ್ಟ್ ಮುಂದೆ ಸಂಜಯ್ ದತ್
ಬಾಲಿವುಡ್ ನಟ ಸಂಜಯ್ ದತ್ ಜೈಲು ವಾಸ ಹೇಗಿದೆ?
ಸರಳುಗಳಿಂದೆ ಸಂಜಯ್ ದತ್ : ಶಿಕ್ಷೆ ಸರಿಯೋ?ತಪ್ಪೋ?


Click it and Unblock the Notifications











