twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡೇತರ ಚಿತ್ರಗಳ ಮೇಲೆ ನಿರ್ಬಂಧ ಅನುಚಿತ -ಹಾಡುಗಾರ ಅಶ್ವಥ್‌

    By Staff
    |

    ಬಳ್ಳಾರಿ : ರಾಜ್ಯದಲ್ಲಿ ಕನ್ನಡೇತರ ಭಾಷೆಗಳ ಚಲನಚಿತ್ರಗಳ ಮೇಲೆ ನಿರ್ಬಂಧ ವಿಧಿಸುವುದು ಅನುಚಿತ. ಇಂತಹ ಯೋಚನೆಗಳು ಕಲೆಯ ಮೂಲಕಲ್ಪನೆಯನ್ನೇ ಬದಿಗೆ ಸರಿಸುತ್ತವೆ ಎಂದು ಹೆಸರಾಂತ ಸಂಗೀತ ನಿರ್ದೇಶಕ ಹಾಗೂ ಗಾಯಕ ಸಿ.ಅಶ್ವಥ್‌ ತಿಳಿಸಿದ್ದಾರೆ.

    ಬಳ್ಳಾರಿಯ ದೊಡ್ಡನಗೌಡ ರಂಗಮಂದಿರದಲ್ಲಿ ‘ಗಾನಸುಧಾ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಲೆಗೆ ಯಾವುದೇ ಜಾತಿ-ಭಾಷೆ-ಧರ್ಮಗಳ ಗಡಿಗಳಿರಬಾರದು. ಭಾವನಾತ್ಮಕತೆಯಿಂದ ಅನೇಕ ಪ್ರತಿಭಾವಂತ ಕಲಾವಿದರ ಸಾಧನೆಗೆ ಪ್ರಾದೇಶಿಕತೆಯ ಲಕ್ಷ್ಮಣರೇಖೆ ಎಳೆಯಬಾರದು ಎಂದರು.

    ನಿರ್ಬಂಧ, ಕಾನೂನು ಮತ್ತು ನೀತಿ-ನಿಯಮಗಳ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬೆಳೆಸಲು ಸಾಧ್ಯವಿಲ್ಲ. ಒಳ್ಳೆಯ ಗುಣಮಟ್ಟದ ಚಿತ್ರಗಳನ್ನು ನೀಡಿ, ಪ್ರೇಕ್ಷಕರನ್ನು ಆಕರ್ಷಿಸಬೇಕು. ಈ ನಿಟ್ಟಿನಲ್ಲಿ ನಾಡಿನ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್‌, ಸಿದ್ದಲಿಂಗಯ್ಯ ಮತ್ತಿತರರ ಚಿತ್ರಗಳು ಉತ್ತರ ಸೂಚಿಸುತ್ತವೆ ಎಂದು ಅಶ್ವಥ್‌ ಹೇಳಿದರು.

    (ಇನ್ಫೋ ವಾರ್ತೆ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, March 28, 2024, 11:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X