Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯೋಗರಾಜ್ ಭಟ್ 'ಡ್ರಾಮಾ'ದಿಂದ ಪ್ರಜ್ಞಾ ಔಟ್
ಯೋಗರಾಜ್ ಭಟ್ಟರ ಹೊಸ ಪ್ರೇಮ ಕಥಾನಕ 'ಡ್ರಾಮಾ' ಚಿತ್ರಕ್ಕೆ ಯಾಕೋ ಏನೋ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ಸ್ವಲ್ಪ ದಿನಗಳ ಹಿಂದಷ್ಟೇ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿ ನಟಿ ಭಾಮಾ ಚಿತ್ರದಿಂದ ಹೊರಬಿದ್ದಿದ್ದರು. ಈಗ ಚಿತ್ರದ ಮತ್ತೊಬ್ಬ ನಾಯಕಿ ಪ್ರಜ್ಞಾ ಅದೇ ರೀತಿಯ ಸಮಸ್ಯೆ ಹೇಳಿ ಚಿತ್ರದಿಂದ ಔಟ್ ಆಗಿದ್ದಾರೆ.
ಪ್ರಜ್ಞಾ ಜಾಗಕ್ಕೆ 'ಲೈಫು ಇಷ್ಟೇನೆ' ನಟಿ ಸಿಂಧು ಲೋಕನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ 'ಡ್ರಾಮಾ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಸಾಧು ಕೋಕಿಲ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಪ್ರಜ್ಞಾ ಮುಗಿಸಿಕೊಡಲೇಬೇಕಾಗಿದೆ. ಹಾಗಾಗಿ ವಿಧಿಯಿಲ್ಲದೆ 'ಡ್ರಾಮಾ'ದಿಂದ ಹೊರಬಂದದ್ದಾಗಿ ಪ್ರಜ್ಞಾ ತಿಳಿಸಿದ್ದಾರೆ.
'ಡ್ರಾಮಾ' ಚಿತ್ರದ ಅಡಿಬರಹವೂ ವಿಭಿನ್ನವಾಗಿದೆ. "ಇನ್ನೂ ಈ ಕಣ್ ನಲ್ಲಿ ಏನೇನ್ ನೋಡ್ಬೇಕಪ್ಪಾ" ಎಂಬುದೇ ಆ ಅಡಿಬರಹ. ಈ 'ಡ್ರಾಮಾ' ಪಾತ್ರಧಾರಿಗಳು ನಟ ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್, ಹಾಗೂ ಸಿಂಧು ಲೋಕನಾಥ್. ವಿಶೇಷ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಪ್ರಕಾಶ್ ರೈ ಕಾಣಿಸಲಿದ್ದಾರೆ. ಸಂಗೀತ ವಿ ಹರಿಕೃಷ್ಣ, ಛಾಯಾಗ್ರಹಣ ಎಸ್ ಕೃಷ್ಣ. (ಏಜೆನ್ಸೀಸ್)