Just In
Don't Miss!
- News
Biden Inauguration live updates: ಅಮೆರಿಕ ಅಧ್ಯಕ್ಷರಾಗಿ ಜೋ ಬೈಡನ್ ಪದಗ್ರಹಣದ ನೇರಪ್ರಸಾರ
- Finance
ಸಿಯೆಟ್ ಲಿಮಿಟೆಡ್ ಲಾಭದ ಪ್ರಮಾಣ ಎರಡೂವರೆ ಪಟ್ಟು ಹೆಚ್ಚಳ
- Sports
ಐಎಸ್ಎಲ್: ಹೈದರಾಬಾದ್ ಜಯಕ್ಕೆ ಅಡ್ಡಿಯಾದ ಕಳಿಂಗ ವಾರಿಯರ್ಸ್
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ವಾಣಿಜ್ಯ ವಾಹನಗಳ ಖರೀದಿಗಾಗಿ ಹಲವು ಆಕರ್ಷಕ ಸಾಲಸೌಲಭ್ಯಗಳಿಗೆ ಚಾಲನೆ ನೀಡಿದ ಟಾಟಾ
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸುಪ್ರೀಂ ಗಿಪ್ರೀಂ ಎಲ್ಲಾ ನಡೆಯಲ್ಲ; ರೆಬಲ್ ಸ್ಟಾರ್ ಅಂಬರೀಷ್
'ದಂಡಂ ದಶಗುಣಂ' ಚಿತ್ರದ ನಿರ್ಮಾಪಕ ಯಾವ ತಪ್ಪುಮಾಡಿಲ್ಲ. ಅವರ ಮುಂದಿನ ಚಿತ್ರಗಳಲ್ಲಿ ಯಾವ ಕಲಾವಿದರು ನಟಿಸಬಾರದು ಎಂಬ ನಿರ್ಧಾರ ಕೈಗೊಳ್ಳಲು ಕಲಾವಿದರ ಸಂಘಕ್ಕೆ ಯಾವ ಅಧಿಕಾರವೂ ಇಲ್ಲ. ಚಲನಚಿತ್ರ ವಾಣಿಜ್ಯ ಮಂಡಳಿಯೇ ಸುಪ್ರೀಂ ಎಂದು ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹೇಳಿರುವುದು ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ಅವರ ಪಿತ್ತ ಕೆರಳಿಸಿದೆ.
"ಸುಪ್ರೀಂ ಗಿಪ್ರೀಂ ಎಲ್ಲಾ ನಡೆಯಲ್ಲಾ. ಚಲನಚಿತ್ರೋದ್ಯಮ ಒಂದೇ ಕುಟುಂಬ ಇದ್ದಂತೆ ಎಂದು ಮೈಸೂರಿನಲ್ಲಿ ಅಂಬರೀಷ್ ಸೋಮವಾರ (ಮಾ.21) ಗುಡುಗಿದರು. ರಮ್ಯಾ ಕಿರಿಕ್ ಆದರೆ ನಿರ್ಮಾಪಕರು ಪದೇ ಪದೇ ಯಾಕೆ ಆಕೆಯ ಕಾಲ್ ಶೀಟ್ ಕೇಳುತ್ತಾರೆ ಎಂದು ಅಂಬಿ ಪ್ರಶ್ನಿಸಿದ್ದಾರೆ. ಈ ಮೂಲಕ ಫಿಲಂ ಚೇಂಬರ್ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಅವರಿಗೂ ತಿರುಗೇಟು ನೀಡಿದರು.
ಅಂಬರೀಷ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿದ್ದ ಬಸಂತ್ ಕುಮಾರ್ ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ."ಅಂಬರೀಷ್ ಅವರಿಗೆ ತಿರುಗೇಟು ನೀಡುವ ಉದ್ದೇಶ ನನ್ನದಲ್ಲ. ಅವರಷ್ಟು ದೊಡ್ಡವನು ನಾನಲ್ಲ. ಅಂಬರೀಷ್ ಅವರಿಗೆ ಪಕ್ಕದಲ್ಲಿ ಯಾರೋ ದಾರಿ ತಪ್ಪಿಸಿರಬೇಕು. ಅವರು ಈ ರೀತಿ ಪ್ರತಿಕ್ರಿಯಿಸುವವರೇ ಅಲ್ಲ" ಎಂದಿದ್ದಾರೆ.
ನಾನು ಹೇಳಿದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಸುಪ್ರೀಂ ಎಂದು. ಅದರ ನಿರ್ಣಯಕ್ಕೆ ಎಲ್ಲರೂ ತಲೆಬಾಗಲೇ ಬೇಕು ಎಂದು. ಅದನ್ನು ಅಂಬರೀಷ್ ಅವರು ತಪ್ಪಾಗಿ ಅರ್ಥೈಸಿದ್ದಾರೆ. ಮಂಗಳವಾರ (ಮಾ.22) ನಡೆಯುವ ಸಭೆಯಲ್ಲಿ ರಮ್ಯಾ ವಿವಾದ ಬಗೆಹರಿಯಲಿದೆ. ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದು ಬಸಂತ್ ಸ್ಪಷ್ಟಪಡಿಸಿದ್ದಾರೆ.