Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನನಗೆ ಪ್ರಶಸ್ತಿ ಬೇಕಿಲ್ಲ : ಸೀತಾರಾಂ ವಿರುದ್ಧ ಜಗ್ಗೇಶ್ ಕಿಡಿ
ನಾನು
ನಾಯಕನೇ
ಹೊರತು,
ಪೋಷಕನಟನಲ್ಲ..
ಜನರ
ಪ್ರೀತಿಯೇ
ನನಗೆ
ಪ್ರಶಸ್ತಿ..
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ‘ಮಠ’ ಚಿತ್ರದಲ್ಲಿ ನನ್ನದು ನಾಯಕನ ಪಾತ್ರ. ಆದರೆ ಆಯ್ಕೆ ಸಮಿತಿ ಪೋಷಕ ನಟನ ಪ್ರಶಸ್ತಿ ನೀಡಿದೆ. ಚಿತ್ರರಂಗದಲ್ಲಿ ನಾಯಕನಾಗಲು ನಾನು ಪಟ್ಟ ಪಾಡು, ಅಷ್ಟಿಷ್ಟಲ್ಲ. ಈಗ ಇನ್ನೊಂದು ಅವಮಾನ ನನ್ನ ಪಾಲಿಗೆ ಬಂದಿದೆ ಎಂದರು.
‘ಮಠ’ ನನ್ನ ಅಭಿನಯದ ನೂರನೇ ಚಿತ್ರ. ಜನಮೆಚ್ಚಿದ ಚಿತ್ರ. ಈ ಸರ್ಕಾರದಲ್ಲಿ ಪ್ರಶಸ್ತಿ ದಕ್ಕದು ಎಂಬುದು ನನಗೆ ಗೊತ್ತಿತ್ತು. ಟಿ.ಎನ್.ಸೀತಾರಾಂ ಅವರು ಆಯ್ಕೆ ಸಮಿತಿ ಅಧ್ಯಕ್ಷರಾದ ಮೇಲೆ ಪ್ರಶಸ್ತಿಯ ಆಸೆಯನ್ನು ಬಿಟ್ಟೆ. ಆಯ್ಕೆ ಸಮಿತಿ ನನ್ನನ್ನು ಅವಮಾನಿಸಲು ಪೋಷಕನಟ ಪ್ರಶಸ್ತಿ ನೀಡಿದೆ ಎಂದು ಜಗ್ಗೇಶ್ ದೂರಿದ್ದಾರೆ.
ಸೀತಾರಾಂ ಪ್ರತಿಕ್ರಿಯೆ : ಪೋಷಕ ನಟ ಪ್ರಶಸ್ತಿ ಬಗ್ಗೆ ಜಗ್ಗೇಶ್ ಹಗುರವಾಗಿ ಮಾತನಾಡಿದ್ದಾರೆ. ಈ ಹಿಂದೆ ರವಿಚಂದ್ರನ್, ಅಮಿತಾಭ್, ಅನಂತನಾಗ್ ಮತ್ತಿತರರಿಗೆ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಿದ ನಿದರ್ಶನಗಳಿವೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಟಿ.ಎನ್.ಸೀತಾರಾಂ ಅಭಿಪ್ರಾಯಪಟ್ಟಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)