Don't Miss!
- News Women voters: ರಾಜ್ಯದ 17 ಲೋಕಸಭಾ ಕ್ಷೇತ್ರಗಳಲ್ಲಿ ಮಹಿಳೆಯರದ್ದೇ ಪಾರುಪತ್ಯ!
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರೋದ್ಯಮ ಬಿಕ್ಕಟ್ಟು ನಿವಾರಣೆಯ ‘ಸಿದ್ಧ’ ಸೂತ್ರ ಅಂಗೀಕಾರ
ಬೆಂಗಳೂರು : ನವರಾತ್ರಿ ಮುನ್ನವೇ ರಾಜ್ಯದಲ್ಲಿನ ಬಿಕ್ಕಟ್ಟುಗಳು ದೂರವಾಗುತ್ತಿವೆ. ವರುಣನ ದಯೆಯಿಂದ ರೈತರು ಭರವಸೆಯಿಂದ ಬದುಕುತ್ತಿದ್ದಾರೆ. ವೀರಪ್ಪನ್ ಕರಾಳ ಅಧ್ಯಾಯ ಮುಕ್ತಾಯವಾಗಿದೆ. ಉತ್ತರ ಕರ್ನಾಟಕದವರ ಗೋಳು ಅರ್ಧ ಮುಗಿದಿದೆ. ಕನ್ನಡ ಚಿತ್ರೋದ್ಯಮದಲ್ಲಿನ ಗೊಂದಲದ ವಾತಾವರಣ ಸಹಾ ತಿಳಿಯಾಗಿದೆ.
ಪರಭಾಷಾ ಚಿತ್ರಗಳ ನಿರ್ಬಂಧವನ್ನು ಮೂರು ವಾರಗಳಿಗೆ ಇಳಿಸುವುದು, ಈ ಚಿತ್ರಗಳ ಆರು ಪ್ರಿಂಟ್ಗಳ ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸುವ ಸೂತ್ರದ ಪರಿಣಾಮ ಕನ್ನಡ ಚಿತ್ರೋದ್ಯಮದಲ್ಲಿನ ಬಿಕ್ಕಟ್ಟು ತಕ್ಷಣಕ್ಕೆ ಶಮನಗೊಂಡಿದೆ.
ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ(ಅಕ್ಟೋಬರ್ 20)ದಂದು ನಡೆದ ಉನ್ನತಾಧಿಕಾರದ ಸಮಿತಿ ಸಭೆಯಲ್ಲಿ, ಈ ಸೂತ್ರವನ್ನು ಪ್ರಾಯೋಗಿಕವಾಗಿ ಒಂದು ವರ್ಷಗಳ ಕಾಲ ಅನುಸರಿಸಲು ಚಿತ್ರೋದ್ಯಮದ ಮೂರು ವಲಯಗಳು ಒಪ್ಪಿವೆ. ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವೆ ಹಗ್ಗಜಗ್ಗಾಟ ನಡೆದು, ಕೆಲವು ರಹಸ್ಯ ಮಾತುಕತೆಗಳ ನಂತರ ಈ ಬಗೆಗೆ ಸಹಮತ ಮೂಡಿತು.
ಸುಪ್ರಿಂಕೋರ್ಟ್ ಮೆಟ್ಟಿಲು ಹತ್ತಿರುವ ಶಂಕರ್ದಾದಾ ಎಂಬಿಬಿಎಸ್ ಚಿತ್ರಕ್ಕೆ ವಿನಾಯಿತಿ ನೀಡಲು ಸಭೆ ನಿರ್ಧರಿಸಿತು.
ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಚ್.ಡಿ.ಗಂಗರಾಜು, ಪಾರ್ವತಮ್ಮ ರಾಜ್ಕುಮಾರ್, ಅಂಬರೀಷ್, ಬಸಂತ್ಕುಮಾರ್ ಪಾಟೀಲ್, ಓದುಗೌಡರ್, ರಾಮು, ಉಪೇಂದ್ರ, ಪರಭಾಷಾ ಚಿತ್ರಗಳ ವಿತರಕರು ಸೇರಿದಂತೆ ಚಿತ್ರೋದ್ಯಮದ ಗಣ್ಯರು ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್