ಹೈಕೋರ್ಟಲ್ಲಾದರೂ ಸಿಗುವುದೆ ದರ್ಶನ್ ಗೆ ಜಾಮೀನು?

1ನೇ ಎಸಿಎಂಎಂ ನ್ಯಾಯಾಲಯ ಮತ್ತು ಪ್ರಿನ್ಸಿಪಾಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ತಿರಸ್ಕೃತರಾಗಿರುವ ದರ್ಶನ್ ಅವರಿಗೆ ಇದು ಕಡೆಯ ಆಶಾಕಿರಣ. ಕೈದಿ ನಂ.8993 ಆಗಿ ಜೈಲು ಸೇರಿರುವ ದರ್ಶನ್ ಅವರ ನ್ಯಾಯಾಂಗ ಬಂಧನವನ್ನು ಅ.4ರವರೆಗೆ ವಿಸ್ತರಿಸಲಾಗಿದೆ.
ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿಜೇಶ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡಿ ಸೆ.9ರಂದು ಬಂಧಿತರಾಗಿದ್ದ ದರ್ಶನ್ 12 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನ ರಾಗಿಮುದ್ದೆಯನ್ನು ತಪ್ಪಿಸಿಕೊಂಡು ಆಸ್ಪತ್ರೆ ಸೇರಿದ್ದರು. ಜೈಲು ಸೇರುತ್ತಿದ್ದಂತೆ ಅವರಲ್ಲಿ ಕಾಮಾಲೆ ರೋಗ ಕಾಣಿಸಿಕೊಂಡಿತ್ತು.
ಹೈಕೋರ್ಟ್ ನಲ್ಲಾದರೂ ತಮ್ಮ ನೆಚ್ಚಿನ ನಟ ದರ್ಶನ್ ಗೆ ಜಾಮೀನು ಸಿಗುವುದೆಂದು ಸಹಸ್ರಾರು ಅಭಿಮಾನಿಗಳು ಕಾದುಕುಳಿತಿದ್ದಾರೆ. ಅನೇಕರು ದೇವರಿಗೆ ಪೂಜೆ ಮಾಡಿಸುತ್ತಿದ್ದರೆ, ಕೆಲವರು ತಲೆ ಬೋಳಿಸಿಕೊಂಡು 'ಬಾಸ್' ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. [ದರ್ಶನ್ ಕರ್ಮಕಾಂಡ ಕುರಿತ ಎಲ್ಲಾ ಲೇಖನಗಳು]
More from Filmibeat
English summary
Kannada actor Darshan's bail plea will come for hearing in Karnataka high court on September 22 before Jusitce VB Pinto. Darshan has been put in Parappana Agrahara jail for assaulting his wife Vijayalakshmi.
ದರ್ಶನ್ ವಿಜಯಲಕ್ಷ್ಮಿ ಕೌಟುಂಬಿಕ ದೌರ್ಜನ್ಯ ಕರ್ನಾಟಕ ಹೈಕೋರ್ಟ್ ಬೆಂಗಳೂರು darshan karnatka high court bangalore vijayalakshmi


Click it and Unblock the Notifications











