Don't Miss!
- Automobiles HSRP ನಂಬರ್ ಪ್ಲೇಟ್ನಲ್ಲಿ ನಡೆಯುತ್ತಿದೆ ಭಾರೀ ಮೋಸ: ಬುಕ್ ಮಾಡದವರು ಇದನ್ನು ಗಮನಿಸಿ!
- News Bengaluru Rain: ಮುದ್ದಿನ ನಾಯಿಮರಿಗೆ ಮೊದಲ ಮಳೆ ತೋರಿಸಿ ಖುಷಿ ಪಟ್ಟ ವ್ಯಕ್ತಿ; ವಿಡಿಯೋ ವೈರಲ್
- Lifestyle ಮಕ್ಕಳಲ್ಲಿ ಮಲೇರಿಯಾ: ಹೇಗೆ ಬರುತ್ತದೆ, ಇದರ ಲಕ್ಷಣಗಳೇನು? ತಡೆಗಟ್ಟುವುದು ಹೇಗೆ?
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟ್ಯೂನ್ ಕದಿಯೋದು ಪೈರಸಿಗಿಂತ ನೀಚ ಕೆಲ್ಸ : ಮನೋಮೂರ್ತಿ
ಸಂಪಾದಕರೆ,
ಮುಂಗಾರು ಮಳೆ ಚಿತ್ರದ ಸಂಗೀತವನ್ನು 'ವಾನಾ' ಎಂಬ ತೆಲುಗು ಚಿತ್ರದಲ್ಲಿ ಬಳಸಿಕೊಳ್ಳುತ್ತಿರುವುದಾಗಿ ಎಂದು ನಾಲ್ಕು ತಿಂಗಳ ಹಿಂದೆ ಚೈನ್ನೈನ ಸಂಗೀತಗಾರರು ಹಾಗೂ ರೆಕಾರ್ಡಿಂಗ್ ಇಂಜೀನಿಯರ್ಗಳು ನನಗೆ ತಿಳಿಸಿದ್ದರು . ಆ ಸಮಯದಲ್ಲಿ ನಾನು ವಾನಾ ಚಿತ್ರದ ನಿರ್ಮಾಪಕರನ್ನು ಸಂಪರ್ಕಿಸಿದಾಗ, ಅವರು ನಾನು ಸಂಯೋಜನೆ ಮಾಡಿದ ಟ್ಯೂನ್ಗಳಿಗೆ ನನ್ನ ಹೆಸರೇ ನೀಡುವುದಾಗಿ ಭರವಸೆ ನೀಡಿದ್ದರು. ಕಳೆದ ಕೆಲ ದಿನಗಳ ಹಿಂದೆ 'ವಾನಾ' ಚಿತ್ರದ ಧ್ವನಿಸುರಳಿ ಬಿಡುಗಡೆಗೊಂಡಿದ್ದು, ಅದರಲ್ಲಿರುವ ನಾಲ್ಕು ಹಾಡುಗಳನ್ನು ಕೇಳಿದಾಗ, ಅವು ಮುಂಗಾರು ಮಳೆ ಚಿತ್ರದ ಹಾಡುಗಳ ಪಡಿಯಚ್ಚು ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.
ಅನಿಸುತ್ತಿದೆ ಯಾಕೋ ಇಂದು , ಮುಂಗಾರುಮಳೆ ಶೀರ್ಷಿಕೆ ಗೀತೆ, ಇವನು ಗೆಳೆಯನಲ್ಲ ಹಾಗೂ ಅರಳುತಿರು ಹಾಡುಗಳನ್ನು ತೆಲುಗಿಗೆ ಅದೇ ಟ್ಯೂನ್ನೊಂದಿಗೆ ಭಟ್ಟಿ ಇಳಿಸಲಾಗಿದೆ. ಧ್ವನಿಸುರುಳಿಯಲ್ಲಿ ನನ್ನ ಹೆಸರನ್ನು ನೀಡುವ ಸೌಜನ್ಯತೆಯನ್ನು ಅವರು ತೋರಿಸಿಲ್ಲ. ಇದು ಪೈರೆಸಿಗಿಂತಾ ನೀಚವಾದ ಕೆಲಸ. ಸೃಜನಶೀಲ ಕೃತಿಯೊಂದನ್ನು ಹಗಲು ಹೊತ್ತಿನಲ್ಲೇ ಹರಣ ಮಾಡಿದಂತಾಗಿದೆ. ಯಾರದೋ ಮಗುವನ್ನು ಎತ್ತಿಕೊಂಡು ಹೋಗಿ ತಮ್ಮದೇ ಆ ಮಗು ಎನ್ನುವಂತಿದೆ ಈ ಪ್ರಸಂಗ. ಇದರಿಂದ ನನಗೆ ನೋವಾಗಿದ್ದು, ನಾನು ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದೇನೆ. ತೆಲುಗು ನಿರ್ಮಾಪಕರಿಗೆ ಸರಿಯಾದ ಪಾಠ ಕಲಿಸುವ ನಿರ್ಧಾರ ಮಾಡಿದ್ದೇನೆ.
-ಮನೋಮೂರ್ತಿ
ಸಂಗೀತ
ನಿರ್ದೇಶಕ
ಪೂರಕ
ಓದಿಗೆ
ಮನೋಮೂರ್ತಿಗೆ
ತೆಲುಗು
ನಿರ್ಮಾಪಕರಿಂದ
ಅಪಚಾರ!