ಕನ್ನಡ ಚಿತ್ರಗಳ ದುಃಸ್ಥಿತಿಗೆ ನಮ್ಮವರೇ ಕಾರಣ!
ಸೀಮಿತ ಮಾರುಕಟ್ಟೆಯುಳ್ಳ ನಮ್ಮ ಚಿತ್ರರಂಗ ಬೆಳೆಸಲು ಪರ ಭಾಷೆಯ ಬಿಗ್ ಬಜೆಟ್ ಚಿತ್ರಗಳ ವಿತರಣೆ ಹಕ್ಕುಗಳನ್ನು ನಮ್ಮ ಚಿತ್ರಕರ್ಮಿಗಳು ಪಡೆಯುವುದು ನಡದೇ ಇದೆ. ಅದರಲ್ಲಿ ತಪ್ಪೇನಿಲ್ಲ.
ಅದರಲ್ಲಿ ಬರುವ ಲಾಭವನ್ನು ಮತ್ತೆ ಕನ್ನಡ ಚಿತ್ರರಂಗಕ್ಕೆ ಸುರಿಯುತ್ತೇವೇ ಎಂದು ಹೇಳುತ್ತಾರೆ ಆದರೆ, ವಾಸ್ತವವೇ ಬೇರೆ. ಪರ ಭಾಷೆ ಚಿತ್ರಗಳ ವಿತರಣೆ ಹಕ್ಕು ಪಡೆಯುವ ಕನ್ನಡ ಚಿತ್ರರಂಗದ ಪ್ರಭಾವಿ ನಟ, ನಿರ್ಮಾಪಕರು ನಂತರ ಆ ಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಬೇಕಾಗುತ್ತದೆ.
ಜೊತೆಗೆ ಇವರಲ್ಲಿ ಹಲವರು ವಾಣಿಜ್ಯ ಮಂಡಳಿಯಲ್ಲಿದ್ದವರು ಹಾಗಾಗಿ ನಿಯಮದ ಬಗ್ಗೆ ಪ್ರತ್ಯೇಕ ಪಾಠವಿಲ್ಲದೆ ಸರಾಗವಾಗಿ ತಮ್ಮ ಸ್ವಂತ ವ್ಯವಹಾರ ಮುಗಿಸಿ ಬಿಡುತ್ತಾರೆ.
ಕೆಎಫ್ ಸಿಸಿಯ ಸಕ್ರಿಯ ಸದಸ್ಯರಾಗಿರುವ ನಿರ್ಮಾಪಕ ಕಮ್ ವಿತರಕ ಕೆ ಮಂಜು ಅವರು ನಿಯಮ ಮೀರಿ ಹೆಚ್ಚಿನ ಚಿತ್ರಮಂದಿರಗಳಲ್ಲಿ ತಮಿಳು ಚಿತ್ರ ತೆರೆಕಾಣುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪವಿದೆ.
ಕನ್ನಡ ಚಿತ್ರಗಳಿಗೆ ಕುತ್ತು? :ವೇಲಾಯುಧಂ ಅಲ್ಲದೆ, ಶಾರುಖ್ ಖಾನ್ ನ 'ರಾ. ಒನ್' ಹಾಗೂ ಸೂರ್ಯನ '7ಮ್ಅರಿವು' ಚಿತ್ರಗಳು ಹಬ್ಬದ ಸಮಯಕ್ಕೆ ದಾಳಿ ಮಾಡಲಿದೆ. ಈ ಚಿತ್ರಗಳ ಜೊತೆ ಕನ್ನಡದ ಪರಮಾತ್ಮ, ಸಾರಥಿ ಹಾಗೂ ಇತರ ಚಿತ್ರಗಳು ಹೋರಾಟ ಮಾಡಬೇಕಿದೆ.
ದೀಪಾವಳಿ ಸಮಯದಲ್ಲಿ ಕನ್ನಡ ಚಿತ್ರಮಂದಿರಗಳಲ್ಲಿ ಬರೀ ಪರಭಾಷೆ ಪಟಾಕಿ ಸದ್ದು ಕೇಳಿಸಿದರೆ ಅದಕ್ಕೆ ಕೆಎಫ್ ಸಿಸಿಯೇ ನೇರ ಕಾರಣ? ಕನ್ನಡ ಚಿತ್ರಗಳು ಕರ್ನಾಟಕ ಬಿಟ್ಟು ಬೇರೆ ಕಡೆ ಸಿಗೋದಿಲ್ಲ? ಇಲ್ಲಿ ಥೇಟರ್ ಗಳಲ್ಲಿ ಕನ್ನಡ ಚಿತ್ರ ಎಂದರೆ ಅಸಡ್ಡೆಯಾದರೆ, ಪ್ರೇಕ್ಷಕನ ಪಾಲಿಗೆ ಕಿರುತೆರೆಯೇ ಗತಿ.


Click it and Unblock the Notifications











