Don't Miss!
- Automobiles ಸಾಮಾನ್ಯರಂತೆ ಹಳ್ಳಿಯಲ್ಲಿರುವ ದೇಶದ 55ನೇ ಶ್ರೀಮಂತ ಶ್ರೀಧರ್ ವೆಂಬು: ಕಚೇರಿಗೆ ಹೋಗಲು ಎಲೆಕ್ಟ್ರಿಕ್ ಆಟೋ ಖರೀದಿ!
- News Helicopters Crash: ಸೇನೆಯ ಎರಡು ಹೆಲುಕಾಪ್ಟರ್ ಡಿಕ್ಕಿ: 10 ಜನರ ಸಾವು
- Finance ಬೆಂಗಳೂರಿನಲ್ಲಿ ಈ ಜಾಗದಲ್ಲಿ ಸೈಟು ಖರೀದಿಸಬೇಡಿ: BDAಯಿಂದ 279 ಅಕ್ರಮ ಬಡಾವಣೆ ಪತ್ತೆ
- Technology Google Chrome: ಗೂಗಲ್ ಕ್ರೋಮ್ ಬಳಕೆದಾರರು ಹ್ಯಾಕಿಂಗ್ ಅಪಾಯದಲ್ಲಿ! ಸುರಕ್ಷಿತವಾಗಿರೋದು ಹೇಗೆ?
- Sports IPL 2024: ವಿರಾಟ್ ಕೊಹ್ಲಿ ವಿವಾದಾತ್ಮಕ ಔಟ್; ಅಂಪೈರಿಂಗ್ ವಿರುದ್ಧ ಕೆಂಡಕಾರಿದ ಮೊಹಮ್ಮದ್ ಕೈಫ್!
- Lifestyle ಮನೆಯಲ್ಲಿ ಘಮ ಘಮಿಸುವ ಮಲ್ಲಿಗೆ ಗಿಡ ಬೆಳೆಸೋದು ಹೇಗೆ..? ಇಲ್ಲಿದೆ ಮಾಹಿತಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
‘ಅಯ್ಯೋ ಪಾಂಡು’ಗೆ ಜೀವಭಯ !
*ದಟ್ಸ್ಕನ್ನಡ ಬ್ಯೂರೊ
‘ಜಗಳಗಂಟ ಪಾಂಡು’ ; ಇದು ಪಾಪ ಪಾಂಡು ಖ್ಯಾತಿಯ ಚಿದಾನಂದ್ಗೆ ಹೊಸ ಹೆಸರು!
ವಿಷಯ ಇಷ್ಟು : ಕಿರುತೆರೆಯ ಖ್ಯಾತ ನಿರ್ದೇಶಕ ಸಿಹಿ ಕಹಿ ಚಂದ್ರು ಅವರ ‘ಪಾಪ ಪಾಂಡು’ ಧಾರಾವಾಹಿಯಿಂದ ಎತ್ತಂಗಡಿಯಾಗಿ, ಅಭಿಮಾನಿಗಳಿಂದ ‘ಅಯ್ಯೋ ಪಾಪ’ ಎನ್ನಿಸಿಕೊಂಡಿದ್ದ ಚಿದಾನಂದ್, ಈಗ ಹೊಸ ಗೆಳೆಯರೊಂದಿಗೂ ಜಗಳವಾಡಿಕೊಂಡಿದ್ದಾರೆ.
ಸಿಹಿಕಹಿ ಚಂದ್ರು ಅವರೊಂದಿಗಿನ ವಿರಸದ ನಂತರ ಚಿದಾನಂದ್ ಬಾ.ಮಾ.ಹರೀಶ್ ಹಾಗೂ ಹರೀಶ್ ಜೈನ್ ಎನ್ನುವ ನಿರ್ಮಾಪಕರೊಂದಿಗೆ ಗೆಳೆತನ ಬೆಳೆಸಿದ್ದರು. ಈ ನಿರ್ಮಾಪಕರ ‘ಅಯ್ಯೋ ಪಾಂಡು’ ಎನ್ನುವ ಚಿತ್ರದಲ್ಲಿ ಚಿದಾನಂದ್ ನಾಯಕ ನಟ. ಇದೇ ನಿರ್ಮಾಪಕರೊಂದಿಗೆ ಚಿದಾನಂದ್ ಕಿರುತೆರೆ ಧಾರಾವಾಹಿಯನ್ನು ಪಾಲುಗಾರಿಕೆಯಲ್ಲಿ ನಿರ್ಮಿಸುತ್ತಿದ್ದು , ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ಪಾಂಡುರಂಗ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಚಿದಾನಂದ್ ಅವರೇ ನಟಿಸಿದ್ದಾರೆ.
ಪ್ರಸ್ತುತ, ‘ಪಾಂಡುರಂಗ’ ಧಾರಾವಾಹಿಯೇ ಗೆಳೆಯರ ನಡುವಿನ ಮುನಿಸಿಗೆ ಕಾರಣವಾಗಿದೆ. ಹರೀಶ್ದ್ವಯರು ಧಾರಾವಾಹಿಯಲ್ಲಿ ಅಶ್ಲೀಲ ಸಂಭಾಷಣೆ ಹೇಳಲು ತಮ್ಮನ್ನು ಒತ್ತಾಯಿಸಿದರು. ಅಶ್ಲೀಲ ಮಾತುಗಳನ್ನು ಹೇಳಲು ನಿರಾಕರಿಸಿದ ಕಾರಣ, ನಿರ್ಮಾಪಕರು ತಮಗೆ ಜೀವ ಬೆದರಿಕೆಯಾಡ್ಡಿದ್ದಾರೆ ಎಂದು ಚಿದಾನಂದ್ ಪೊಲೀಸರಿಗೆ ದೂರು ನೀಡಿದ್ದಾರೆ. ನಿರ್ಮಾಪಕರು ಅಶ್ಲೀಲ ಸಂಭಾಷಣೆ ಹೇಳಲು ಸಭ್ಯವಾಗಿ ನಿರಾಕರಿಸಿದ ತಮ್ಮನ್ನು ಅಶ್ಲೀಲ ಶಬ್ದಗಳಿಂದ ಬಯ್ದರು ಎಂದೂ ಚಿದಾನಂದ್ ಅಲವತ್ತುಕೊಂಡಿದ್ದಾರೆ.
ಚಿದಾನಂದ್ ದೂರನ್ನು ದಾಖಲಿಸಿಕೊಂಡಿರುವ ತಿಲಕ್ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್