Don't Miss!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Lifestyle ಬೆಳ್ಳುಳ್ಳಿ ಕಬಾಬ್ ಅಂದುಕೊಂಡ್ರಾ? ಇದು ಚಿಕನ್ ರುಚಿಯ ಹೂವಿನ ಫ್ರೈ..!
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- News Srivari Seva: ತಿರುಮಲ ಶ್ರೀವಾರಿಯ ಸೇವಕರಾಗಲು ಒಂದು ಅದ್ಭುತ ಅವಕಾಶ.. ಕೂಡಲೇ ಬುಕ್ ಮಾಡಿ
- Automobiles XUV300: ಮಹೀಂದ್ರಾ ಎಕ್ಸ್ಯುವಿ300 ಕಾರನ್ನು ನಿಮ್ಮ ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು, EMI ಏನು?
- Technology OnePlus: ಒನ್ಪ್ಲಸ್ ವಾಚ್ 2 ನಾರ್ಡಿಕ್ ಬ್ಲೂ ಆವೃತ್ತಿ ಲಾಂಚ್! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಜೋಗಯ್ಯನ ಬಗ್ಗೆ ಮೌನ ಮುರಿದ ಶಿವರಾಜ್ ಕುಮಾರ್
ಕಡೆಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ನೂರನೇ ಚಿತ್ರ ಜೋಗಯ್ಯನ ಬಗ್ಗೆ ಮೌನ ಮುರಿದಿದ್ದಾರೆ. ಈ ಚಿತ್ರ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ ಎಂಬ ಮಾತನ್ನು ಶಿವಣ್ಣ ಕೂಡ ಒಪ್ಪುತ್ತಾರೆ. ಚಿತ್ರದ ನಿರ್ದೇಶಕ ಪ್ರೇಮ್ ಬಗ್ಗೆಯೂ ಎಲ್ಲೋ ಒಂಚೂರು ಬೇಸರವಿದೆ ಶಿವಣ್ಣನಿಗೆ.
'ಜೋಗಯ್ಯ' ಚಿತ್ರಕ್ಕೆ ಕೊಟ್ಟ ಪ್ರಚಾರ, ಅತಿಯಾದ ಆತ್ಮವಿಶ್ವಾಸವೇ ಚಿತ್ರಕ್ಕೆ ಮುಳುವಾಯಿತೆ? ಆರಂಭದ ಎರಡು ಮೂರು ವಾರ ಇದ್ದ ಕ್ರೇಜ್ ಕ್ರಮೇಣ ಕಡಿಮೆಯಾಯಿತು. ಚಿತ್ರಕ್ಕೆ ಸಿಕ್ಕಾಪಟ್ಟೆ ಪ್ರಚಾರ ಕೊಟ್ಟಿದ್ದೇ ಇದಕ್ಕೆ ಕಾರಣ ಎನ್ನುತ್ತಾರೆ ಶಿವಣ್ಣ.
ಚಿತ್ರದಲ್ಲಿನ ತಮ್ಮ ಅಭಿನಯದ ಬಗ್ಗೆ ಎಲ್ಲಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿದೆ. ಈ ಬಗ್ಗೆ ತಮಗೆ ಸಂತೋಷವಿದೆ. ಆದರೆ ಚಿತ್ರ ಪ್ರೇಕ್ಷಕರ ನಿರೀಕ್ಷೆಯಂತಿರಲಿಲ್ಲ. 'ಜೋಗಯ್ಯ' ಚಿತ್ರ ಕನ್ನಡ ಚಿತ್ರೋದ್ಯಮಕ್ಕೆ ಒಂದು ಪಾಠ ಕಲಿಸಿದೆ. ಚಿತ್ರವೊಂದು ಸೆಂಚುರಿ ಬಾರಿಸಲಿ ಎಂಬ ಆಸೆ ಎಲ್ಲ ಕಲಾವಿದ, ನಿರ್ದೇಶಕ ನಿರ್ಮಾಪಕರಿಗಿರುತ್ತದೆ. ಆದರೆ ಪ್ರೇಕ್ಷಕರ ಸ್ಪಂದನೆಯೂ ಇದಕ್ಕೆ ಬೇಕಾಗುತ್ತದಲ್ಲವೆ ಎಂದಿದ್ದಾರೆ ಶಿವಣ್ಣ. (ಏಜೆನ್ಸೀಸ್)