Don't Miss!
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಫಿಲ್ಟರ್ ಲೆಸ್ ನಿರ್ದೇಶಕ ಓಂ ಕ್ಷಮೆ ಕೇಳಿದ್ದಾರಂತೆ
ಲಿಂಗಬೇಧ ಮಾಡದೆ ಎಲ್ಲರನ್ನೂ ಒಂದೇ ಭಾವದಿಂದ ನೋಡುವ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಫಿಲ್ಟರ್ ಲೆಸ್ ಟಾಂಗ್ ಮೂಲಕ ಗಾಂಧಿನಗರದಲ್ಲೇ ವರ್ಲ್ಡ್ ಫೇಮಸ್ ಆಗಿರುವುದು ಎಲ್ಲರಿಗೂ ತಿಳಿದ ವಿಷಯ.
ಹೀರೋಯಿನ್ ಗಳು ಓಂನಿಂದ ಬೈಯಿಸಿಕೊಳ್ಳದಿದ್ದರೆ ಅದು ಒಂದು ಆಶ್ಚರ್ಯದ ಸಂಗತಿ ಎನ್ನಬಹುದು. ರಕ್ಷಿತಾಳಿಂದ ಹಿಡಿದು ಇತ್ತೀಚಿನ ಪ್ರಣೀತಾ ತನಕ ಓಂ ಮಾತಿನ ಚಟಕ್ಕೆ ತುತ್ತಾಗಿದ್ದಾರೆ.
ಆದರೆ, ಓಂ ಕ್ಷಮೆ ಕೇಳಿದ್ದಾರಂತೆ. ಸ್ಸಾರಿ ಎಂದಿದ್ದು ನಟಿಮಣಿಯರಿಗಲ್ಲ.. ಬದಲಿಗೆ ಕೊರವ ಸಮುದಾಯಕ್ಕೆ.
ಭೀಮಾ ತೀರದಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಹಿರಿಯ ನಟ ಲೋಕನಾಥ್ ಅವರ ಪಾತ್ರದ ಬಗ್ಗೆ ಯಾರೋ ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಆ ಪಾತ್ರನಾ...'ಕಳ್ಳ ಹಾಗೂ ಕೊರಮ'ನ ಪಾತ್ರ ಅಂದಿದ್ದಾರೆ. ಕಳ್ಳ ಓಕೆ.. ಕೊರಮ ಅಂದಿದ್ದು ಏಕೆ ಎಂದು ಕೊರವ ಸಮುದಾಯದವರು ಮುಗಿಬಿದ್ದಿದ್ದಾರಂತೆ. ನಮ್ಮ ಸಮುದಾಯವನ್ನು ಕಳ್ಳರಿಗೆ ಹೋಲಿಸಿ ಮಾತನಾಡಿದ ನಿರ್ದೇಶಕ ಓಂ ತಕ್ಷಣವೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೊನೆಗೆ ಇದಕ್ಕೆ ಪರಿಹಾರ ಎಂಬಂತೆ ಓಂ ಕ್ಷಮೆಯಾಚಿಸಿ ಸುಮ್ಮನಾಗಿದ್ದಾರೆ. ಆಮೇಲೆ ಏನು ಗೊಣಗಿಕೊಂಡರು ಎಂಬುದು ಮಾತ್ರ ಯಾರ ಕಿವಿಗೂ ಬಿದ್ದಿಲ್ಲ.