ಸೆಕ್ಸಾನಂದ 'ಅಯ್ಯಾರೆ' ಚಿತ್ರಕ್ಕೆ ಸೆನ್ಸಾರ್ ಗ್ರೀನ್ ಸಿಗ್ನಲ್
ಸ್ವಾಮಿ ನಿತ್ಯಾನಂದ ಜೀವನ ಚರಿತ್ರೆ ಆಧಾರವಾಗಿ ತೆರೆಗೆ ಮೂಡಿಬರುತ್ತಿದ್ದ ಕನ್ನಡದ 'ಸತ್ಯಾನಂದ' ಚಿತ್ರಕ್ಕೆ 15ನೇ ಹೆಚ್ಚುವರಿ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು. ಆದರೆ ತೆಲುಗಿನಲ್ಲೂ ಇದೇ ರೀತಿಯ ಸೆಕ್ಸಾನಂದ 'ಅಯ್ಯಾರೆ' ಎಂಬ ಚಿತ್ರವೊಂದು ತಯಾರಾಗುತ್ತಿದೆ. ಆದರೆ ಈ ಚಿತ್ರಕ್ಕೆ ಯಾವ ಅಡೆತಡೆಯೂ ಎದುರಾಗದಿರುವುದು ವಿಶೇಷ.
ಈ ಚಿತ್ರದ ವಿರುದ್ಧವೂ ಸ್ವಾಮಿ ನಿತ್ಯಾನಂದ ಧ್ಯಾನಪೀಠ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ನ್ಯಾಯಾಲಯವು ಕೇಂದ್ರ ಸೆನ್ಸಾರ್ ಮಂಡಳಿಯ ಸುಪರ್ದಿಗೆ ಕೇಸನ್ನು ವರ್ಗಾಯಿಸಿತ್ತು. ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ, ನಿತ್ಯಾನಂದ ದೃಶ್ಯಾವಳಿಗಳು ಹಾಗೂ ಡೈಲಾಗ್ಗಳಿಗೆ ಕತ್ತರಿ ಹಾಕುವಂತೆ ಸೂಚಿಸಿ ಚಿತ್ರ ಬಿಡುಗಡೆಗ ಅವಕಾಶ ಕಲ್ಪಿಸಿದೆ.
ಸ್ವಾಮಿ ನಿತ್ಯಾನಂದ ಪಾತ್ರವನ್ನು ತೆಲುಗಿನ ಖ್ಯಾತ ನಟ ರಾಜೇಂದ್ರ ಪ್ರಸಾದ್ ಪೋಷಿಸಿದ್ದಾರೆ. ಕನ್ನಡದ ಸತ್ಯಾನಂದ ಚಿತ್ರದಲ್ಲಿ ಮದನ್ ಪಟೇಲ್ ಮುಖ್ಯಪಾತ್ರಧಾರಿ. ಆದರೆ ಕನ್ನಡದ 'ಸತ್ಯಾನಂದ' ಧ್ಯಾನಸ್ಥ ಸ್ಥಿತಿ ತಲುಪಿದೆ. ತೆಲುಗು ಚಿತ್ರಕ್ಕೆ ಬಿಡುಗಡೆ ಭಾಗ್ಯ ಲಭಿಸಿದೆ. (ಏಜೆನ್ಸೀಸ್)
More from Filmibeat
English summary
Deleting controversial guru Swami Nityananda's references from a Telugu movie Ayyare, decks have been cleared for its release starring Rajendra Prasad. However 15th Additional Court Stayed Kannda movie Sathyananda release.


Click it and Unblock the Notifications












