Don't Miss!
- News Bank Holidays in April: ಏಪ್ರಿಲ್ನಲ್ಲಿ 14 ದಿನಗಳ ಕಾಲ ಬ್ಯಾಂಕ್ ರಜೆ, ಪಟ್ಟಿ ಇಲ್ಲಿದೆ
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇಲ್ಲಿ ಹೋರಾಟ, ಅಲ್ಲಿ ಡಬ್ಬಿಂಗ್: ಅಯ್ಯೋ ಮಂಜುನಾಥಾ!
ದಿನಾಂಕ 23-2-12ರಂದು ನಡೆದ ಕರ್ನಾಟಕ ಚಿತ್ರೋದ್ಯಮ ಬಂದ್ ಯಶಸ್ವಿಯಾಗಿದೆ. ಕೇಂದ್ರ ಸರಕಾರ ಹೇರಿರುವ ವಿಪರೀತ ತೆರಿಗೆ ಬಗ್ಗೆ ಕೆಮ್ಮಿ ಇಡೀ ಇಂಡಿಯನ್ ಚಿತ್ರೋದ್ಯಮ ಈ ತೀರ್ಮಾನ ಕೈಗೊಂಡು ಹೋರಾಟಕ್ಕೆ ಮುಂದಾಗಿತ್ತು. ಕರ್ನಾಟಕದಲ್ಲಿ ಪ್ರತಿಯೊಬ್ಬ ಚಿತ್ರೋದ್ಯಮಿಯೂ ಈ ಬಂದ್ನಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಕೇಳಿಕೊಂಡಿತ್ತು. ಅದಕ್ಕೆ ಸ್ಪಂದಿಸಿದ ಪ್ರತಿಯೊಬ್ಬರೂ ಬೀದಿಗಿಳಿದು ಹೋರಾಟ ಮಾಡಿದರು. ಶೂಟಿಂಗ್-ಡಬ್ಬಿಂಗ್-ಎಡಿಟಿಂಗ್ ಸೇರಿದಂತೇ ಪ್ರತಿ ಹಂತದಲ್ಲೂ ಒಕ್ಕೋರಲಿನಿಂದ ಬಂದ್ ಮಾಡಲಾಯಿತು.
ಆದರೆ ಈ ನಡುವೆಯೇ ತಮಗೂ ಚಿತ್ರೋದ್ಯಮದ ಹೋರಾಟಕ್ಕೂ ಸಂಬಂಧವೇ ಇಲ್ಲ ಎನ್ನುವ ಮಟ್ಟಕ್ಕೆ ತಾತ್ಸಾರ ತೋರಿ, ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ನಿನ್ನೆ ಪೂರ್ತಿ ಅವರ ಸ್ಟೂಡಿಯೋದಲ್ಲಿ 'ಮಂಜುನಾಥ ಬಿಎ ಎಲ್ಎಲ್ಬಿ' ಚಿತ್ರದ ಡಬ್ಬಿಂಗ್ ಮಾಡಿದರು ಎಂದರೆ ನಂಬುತ್ತೀರಾ? ಆದರೆ ಇದು ನಿಜ. ನಿನ್ನೆ ಇಡೀ ರಾಜೇಶ್ ತಮ್ಮ ಸ್ವಂತ ಸ್ಟೂಡಿಯೋದಲ್ಲಿ ಮಂಜುನಾಥ ಚಿತ್ರದ ಡಬ್ಬಿಂಗ್ ಮಾಡಿದ್ದಾರೆ.
ಇತ್ತ ಇಡೀ ಉದ್ಯಮ ಉರಿಬಿಸಿಲಲ್ಲಿ ಬೆವರು ಸುರಿಸಿ ರೋಡಿಗಿಳಿದಿದ್ದರೆ ಅತ್ತ ಡಬ್ಬಿಂಗ್ ನಡೆಯುತ್ತಲೇ ಇತ್ತು. ಮೋಹನ್ ನಿರ್ದೇಶನದ ಈ ಚಿತ್ರದಲ್ಲಿ ಜಗ್ಗೇಶ್ ನಾಯಕ. ಫಿಲಂ ಛೇಂಬರ್ನಲ್ಲಿ ಸದಾ ಕಾಲ ಇದ್ದು, ಕಂಡವರಿಗೆ ಬುದ್ದಿ ಹೇಳುವ ಸ್ಥಾನದಲ್ಲಿದ್ದಾರೋ ಅದೇ ಎ.ಗಣೇಶ್ ಈ ಚಿತ್ರದ ನಿರ್ಮಾಪಕ. ದಂಡಂ ದಶಗುಣಂ ಚಿತ್ರದ ಸಂದರ್ಭದಲ್ಲಿ ಇದೇ ರಮ್ಯಾ ಜೊತೆ ಬೀದಿಜಗಳ ಮಾಡಿಕೊಂಡ ಗಣೇಶ್ಗಾದರೂ ಡಬ್ಬಿಂಗ್ ಮಾಡಿಸಬಾರದು ಎಂಬ ಕನಿಷ್ಟ ಜ್ಞಾನವಾದರೂ ಇಲ್ಲದೇ ಹೋಯಿತಲ್ಲಾ ಎನ್ನುವುದು ದುರಂತಗಳಲ್ಲಿ ದುರಂತ! ಜೈ ಚಿತ್ರೋದ್ಯಮ...(ಒನ್ಇಂಡಿಯಾ ಕನ್ನಡ ವಿಶೇಷ ವರದಿ)