Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಗೆ 'ಕಿಕ್' ತಂದ ತಲೆನೋವು
ಕಿಚ್ಚ ಸುದೀಪ್ ತುಂಬ ನೊಂದುಕೊಂಡಿದ್ದಾರಂತೆ. ಕಾರಣ ಏನು ಅಂತ ಹುಡುಕಿದರೆ ಇದೆಲ್ಲಾ 'ಕಿಕ್'ನಿಂದ ಆದ ಕಿರಿಕ್ ಅನಿಸುತ್ತದೆ. ತೆಲುಗಿನ ಯಶಸ್ವಿ ಚಿತ್ರ 'ಕಿಕ್'ನ್ನು ಕನ್ನಡಕ್ಕೆ ರೀಮೇಕ್ ಮಾಡಲಿರುವ ವಿಚಾರ ಗೊತ್ತು ತಾನೆ. ಇದೀಗ ನಿರ್ಮಾಪಕ ಮತ್ತು ನಿರ್ದೇಶಕರ ಜಗಳದಲ್ಲಿ 'ಕಿಕ್' ಮೂಲೆಗುಂಪಾಗಿದೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸುದೀಪ್ ಒಪ್ಪಿದ್ದರು.
ನಿರ್ಮಾಪಕ ಎನ್ ಕುಮಾರ್ ಮತ್ತು ನಿರ್ದೇಶಕ ಪಿ ಎನ್ ಸತ್ಯ ನಡುವಿನ ಭಿನ್ನಾಭಿಪ್ರಾಯಗಳು ಫಲ ಕಾಣದೆ 'ಕಿಕ್'ಗೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನುತ್ತವೆ ಮೂಲಗಳು. ಹಾಗಾಗಿ 'ಕಿಕ್' ನ ಆನಂದವನ್ನು ಸುದೀಪ್ ಜಸ್ಟ್ ಮಿಸ್ ಮಾಡಿಕೊಂಡಿದ್ದಾರಂತೆ.
ಚಿತ್ರೀಕರಣವನ್ನು ನಿರ್ದೇಶಕರು ಅನಾವಶ್ಯಕವಾಗಿ ಮುಂದೂಡುತ್ತಿದ್ದಾರೆ. ಜನವರಿಯಿಂದ ಇದುವರೆಗೂ 30 ಚಿತ್ರಗಳು ಬಾಕ್ಸಾಫೀಸ್ ಗೆ ಬಂದು ಬಿದ್ದಿವೆ. ಹೆಚ್ಚಿಗೆ ಬಂಡವಾಳ ಹೂಡಿ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ ಎಂಬುದು ನಿರ್ಮಾಪಕರು ಕೊಡುವ ವಿವರಣೆ.
ಚಿತ್ರಕ್ಕಾಗಿ ನಾಲ್ಕು ತಿಂಗಳಿಂದ ಕೆಲಸ ಮಾಡಿದ್ದೇನೆ. ನನಗೆ ಕೊಡಬೇಕಾದ ಸಂಭಾವನೆ ಇನ್ನೂ ಕೊಟ್ಟಿಲ್ಲ. ಹಾಗಾಗಿ ಚಿತ್ರೀಕರಣವನ್ನು ಮುಂದೂಡಿದ್ದೇನೆ ಎಂಬುದು ನಿರ್ದೇಶಕರ ಉತ್ತರ. ಕಡೆಗೆ ಇಬ್ಬರ ಅಭಿಪ್ರಾಯಗಳು ಒಂದು ಹಂತಕ್ಕೆ ಬರದೆ 'ಕಿಕ್' ಚಿತ್ರ ಹಳ್ಳ ಹಿಡಿದಿದೆ. ಇದೀಗ ನಿರ್ಮಾಪಕ ಕುಮಾರ್ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಆದರೆ ಹೊಸ ನಿರ್ದೇಶಕರು ಯಾರು ಎಂಬುದು ಸದ್ಯಕ್ಕೆ ಬಗೆಹರಿಯುವ ತರಹ ಕಾಣುತ್ತಿಲ್ಲ.