ತೋಪೆದ್ದ ಮದುವೆ ಮನೆ; ನಿರ್ಮಾಪಕ ರಕ್ತ ಕಣ್ಣೀರು

ರೆಹಮಾನ್ ನಿರ್ಮಾಣದ 'ಯಜಮಾನ' ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ವಸೂಲಿ ಮಾಡಿತ್ತು. ಆದರೆ ಚಿತ್ರ ದುಡ್ಡು ಮಾಡುವ ಮುನ್ನವೇ ಅದನ್ನು ರೆಹಮಾನ್ ಮಾರಿದ್ದರು. ಕಡೆಗೆ ರೆಹಮಾನ್ಗೆ ಉಳಿದದ್ದು ಚಿತ್ರ ನಿರ್ಮಿಸಿದ ಹೆಮ್ಮೆ ಮಾತ್ರ. ಬಳಿಕ ರೆಹಮಾನ್ ಕೆಲವು ಚಿತ್ರಗಳನ್ನು ನಿರ್ಮಿಸಿದರಾದರೂ ಅವರ ಆರ್ಥಿಕ ಬಿಕ್ಕಟ್ಟು ಮಾತ್ರ ಸುಧಾರಿಸಲಿಲ್ಲ. ಗಣೇಶ್ ಕಾಲ್ಶೀಟ್ ಪಡೆದು ನಿರ್ಮಿಸಿದ 'ಮದುವೆ ಮನೆ' ಕೂಡ ಈಗ ಮಕಾಡೆ ಮಲಗಿದೆ.
ಚಿತ್ರವನ್ನು ನೋಡಿದವರು ಸೂಪರ್ ಎಂದರು, ಹಂಚಿಕೆದಾರ ಕೆ ಮಂಜು ಅದ್ಭುತ ಎಂದರು. ರೆಹಮಾನ್ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಅವರು ಗಾಂಧಿನಗರಕ್ಕೆ ಬಂದಿಳಿದಿದ್ದಾರೆ. ಈಗ ಅವರ ಕಣ್ಮುಂದೆ ಮಾರಿದ ಮನೆಯ ಚಿತ್ರಣ ಮಾತ್ರ ಕಾಣುತ್ತಿದೆ.
ಸಾಲಸೋಲ ಮಾಡಿ ರೆಹಮಾನ್ ಮದುವೆ ಮನೆ ಕಟ್ಟಿದರು. ಈಗ ಮದುವೆ ಮನೆ ಗವ್ ಎನ್ನುತ್ತಿದೆ. ಕೆ ವಿ ನಾಗೇಶ್ ಕುಮಾರ್ಗೆ ಕೊಟ್ಟಿದ್ದ ರು.20 ಲಕ್ಷದ ಚೆಕ್ ಸಮಸ್ಯೆ ಬಗೆಹರಿಯುವ ದಾರಿ ರೆಹಮಾನ್ಗೆ ಕಾಣುತ್ತಿಲ್ಲ. ನಾಗೇಶ್ ನಿರ್ಮಾಪಕರ ಸಂಘಕ್ಕೆ ಮೊರೆ ಹೋಗಿದ್ದಾರೆ. ಸ್ವಲ್ಪ ದಿನ ಕಾಯಿರಿ ಎಂದು ಕೆ ಮಂಜು ಭವರಸೆ ನೀಡಿದ್ದು ನಾಗೇಶ್ ಸೈಲೆಂಟಾಗಿದ್ದಾರೆ. ಈಗಾಗಲೆ ಮನೆ ಮಾರಿಕೊಂಡಿರುವ ರೆಹಮಾನ್ ದುಡ್ಡು ಹೇಗೆ ಹೊಂಚುತ್ತಾರೆ ಎಂಬ ಪ್ರಶ್ನೆ ಭೂತಾಕಾರಾವಾಗಿ ಕಾಡುತ್ತಿದೆ.


Click it and Unblock the Notifications











