Don't Miss!
- News ನೇಹಾ ಹಿರೇಮಠ ಕೊಲೆ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತೋಪೆದ್ದ ಮದುವೆ ಮನೆ; ನಿರ್ಮಾಪಕ ರಕ್ತ ಕಣ್ಣೀರು
ರೆಹಮಾನ್ ನಿರ್ಮಾಣದ 'ಯಜಮಾನ' ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ವಸೂಲಿ ಮಾಡಿತ್ತು. ಆದರೆ ಚಿತ್ರ ದುಡ್ಡು ಮಾಡುವ ಮುನ್ನವೇ ಅದನ್ನು ರೆಹಮಾನ್ ಮಾರಿದ್ದರು. ಕಡೆಗೆ ರೆಹಮಾನ್ಗೆ ಉಳಿದದ್ದು ಚಿತ್ರ ನಿರ್ಮಿಸಿದ ಹೆಮ್ಮೆ ಮಾತ್ರ. ಬಳಿಕ ರೆಹಮಾನ್ ಕೆಲವು ಚಿತ್ರಗಳನ್ನು ನಿರ್ಮಿಸಿದರಾದರೂ ಅವರ ಆರ್ಥಿಕ ಬಿಕ್ಕಟ್ಟು ಮಾತ್ರ ಸುಧಾರಿಸಲಿಲ್ಲ. ಗಣೇಶ್ ಕಾಲ್ಶೀಟ್ ಪಡೆದು ನಿರ್ಮಿಸಿದ 'ಮದುವೆ ಮನೆ' ಕೂಡ ಈಗ ಮಕಾಡೆ ಮಲಗಿದೆ.
ಚಿತ್ರವನ್ನು ನೋಡಿದವರು ಸೂಪರ್ ಎಂದರು, ಹಂಚಿಕೆದಾರ ಕೆ ಮಂಜು ಅದ್ಭುತ ಎಂದರು. ರೆಹಮಾನ್ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಅವರು ಗಾಂಧಿನಗರಕ್ಕೆ ಬಂದಿಳಿದಿದ್ದಾರೆ. ಈಗ ಅವರ ಕಣ್ಮುಂದೆ ಮಾರಿದ ಮನೆಯ ಚಿತ್ರಣ ಮಾತ್ರ ಕಾಣುತ್ತಿದೆ.
ಸಾಲಸೋಲ ಮಾಡಿ ರೆಹಮಾನ್ ಮದುವೆ ಮನೆ ಕಟ್ಟಿದರು. ಈಗ ಮದುವೆ ಮನೆ ಗವ್ ಎನ್ನುತ್ತಿದೆ. ಕೆ ವಿ ನಾಗೇಶ್ ಕುಮಾರ್ಗೆ ಕೊಟ್ಟಿದ್ದ ರು.20 ಲಕ್ಷದ ಚೆಕ್ ಸಮಸ್ಯೆ ಬಗೆಹರಿಯುವ ದಾರಿ ರೆಹಮಾನ್ಗೆ ಕಾಣುತ್ತಿಲ್ಲ. ನಾಗೇಶ್ ನಿರ್ಮಾಪಕರ ಸಂಘಕ್ಕೆ ಮೊರೆ ಹೋಗಿದ್ದಾರೆ. ಸ್ವಲ್ಪ ದಿನ ಕಾಯಿರಿ ಎಂದು ಕೆ ಮಂಜು ಭವರಸೆ ನೀಡಿದ್ದು ನಾಗೇಶ್ ಸೈಲೆಂಟಾಗಿದ್ದಾರೆ. ಈಗಾಗಲೆ ಮನೆ ಮಾರಿಕೊಂಡಿರುವ ರೆಹಮಾನ್ ದುಡ್ಡು ಹೇಗೆ ಹೊಂಚುತ್ತಾರೆ ಎಂಬ ಪ್ರಶ್ನೆ ಭೂತಾಕಾರಾವಾಗಿ ಕಾಡುತ್ತಿದೆ.