Don't Miss!
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ದರ್ಶನ ಪ್ರಚಾರ ಮಾಡಿದ್ದು ಏಕೆ? ಇದಕ್ಕೂ ಸುಮಲತಾಗೂ ಸಂಬಂಧ ಇದೆಯಾ?
- Automobiles ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- Lifestyle ರಸ್ತೆ ಬದಿಯ ಮರಗಳಿಗೆ ಬಣ್ಣ ಏಕೆ ಬಳಿದಿರುತ್ತಾರೆ..? ಕೆವಿನ್ ಪೀಟರ್ಸನ್ಗೆ ಈ ಪ್ರಶ್ನೆ ಕಾಡಿದ್ದೇಕೆ..?
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Sports ಟಿ20 ವಿಶ್ವಕಪ್ ಬಗ್ಗೆ ಸ್ಪಷ್ಟನೆ ಕೇಳಿದ ವಿರಾಟ್ ಕೊಹ್ಲಿ; ಕಹಾನಿ ಮೇ ಟ್ವಿಸ್ಟ್ ನೀಡಿದ ಬಿಸಿಸಿಐ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಳಸಿದ ನರ- ನಾರಾಯಣ ಸಂಬಂಧ !
*ಎಸ್ಕೆ.ಶಾಮಸುಂದರ
‘ವೀರಸಿಂಹ’ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತ ನಡೆಯಿತು. ಹಾಗೆನ್ನುವ ಸುದ್ದಿ , ವಿಷ್ಣುವರ್ಧನ್- ನಾರಾಯಣ್ ಜೋಡಿ ಹಾರ ಹಾಕಿಕೊಂಡಿರುವ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿ 15 ದಿನಗಳೇ ಕಳೆದಿವೆ. ಅದರ ಹಿಂದಿನ ದಿನವಷ್ಟೇ ‘ವೀರಸಿಂಹ’ದ ಪ್ರಾಜೆಕ್ಟೇ ರದ್ದಾದ ಸುದ್ದಿ ಇನ್ನು ಎಲ್ಲೂ ಬಂದಿಲ್ಲ .
‘ಸಿಂಹಾದ್ರಿಯ ಸಿಂಹ’ ಎರಡನೇ ವಾರಕ್ಕೆ ಸುಸ್ತಾಗಿ ಮಲಗಿದ್ದಕ್ಕೂ ‘ವೀರಸಿಂಹ’ ಸೆಟ್ಟೇರುವ ಮೊದಲೇ ರಿಟೈರ್ ಆಗಿರುವುದಕ್ಕೂ ಸಂಬಂಧ ಇದೆಯಾ? ವಿಷ್ಣು-ನಾರಾಯಣ್ ಜೋಡಿ ಮಧ್ಯೆ ಸಣ್ಣದೊಂದು ಬಿರುಕು ಉದ್ಭವ ಆಯಿತಾ? ವೈಜಾಗ್ ರಾಜು ಎಂಬ ಹಳೆ ಹುಲಿಗೆ ವಿಷ್ಣು ಮಾಡಿದ್ದ ಪ್ರಾಮಿಸ್ ವಿನಾ ಕಾರಣ ಬಿದ್ದು ಹೋಯಿತಾ?
ಸ್ಯಾಂಡಲ್ವುಡ್ನಲ್ಲಿ ಪ್ರಶ್ನೆಗಳು ಇಟ್ಟಾಡುತ್ತಿವೆ. ಆದರೆ ನಾರಾಯಣ್ ಮತ್ತು ವಿಷ್ಣುವರ್ಧನ್ ಇಬ್ಬರೂ ಈ ಬೆಳವಣಿಗೆಯಿಂದ ಪ್ರಸನ್ನಚಿತ್ತರಾಗಿದ್ದಾರಂತೆ. ಮೂಲವೊಂದರ ಪ್ರಕಾರ ‘ವೀರಸಿಂಹ’ ಮುಹೂರ್ತ ನಡೆದ ಮೂರನೆ ದಿನವೇ ನಾರಾಯಣ್ ಸ್ಕಿೃಪ್ಟ್ ಹಾಳೆ ಹಿಡಿದುಕೊಂಡು ವಿಷ್ಣು ಮನೆಗೆ ಬಂದಿದ್ದರು. ‘ಈ ಕಥೆಯನ್ನು ನಿಭಾಯಿಸೋದಕ್ಕೆ ನನ್ಕೈಲಿ ಆಗೊಲ್ಲಪ್ಪ . ನಿಮ್ಮ ರೇಂಜ್ಗೆ ತಕ್ಕ ಹಾಗೆ ಈ ಸಿನಿಮಾನ ಡೈರೆಕ್ಟ್ ಮಾಡೋದಕ್ಕೂ ನನ್ನ ಕೈಲಿ ಸಾಧ್ಯವಿಲ್ಲ’ ಎಂದು ಕೈ ಮುಗಿದರು. ವಿಷ್ಣು ದೂಸರಾ ಮಾತಾಡದೆ ‘ಹಾಗೇ ಆಗಲಿ’ ಎಂದು ಕೈ ತೋರಿಸಿದ್ದು ಮಾತ್ರ ನಾರಾಯಣ್ ಅವರಿಗೆ ಆಶ್ಚರ್ಯವನ್ನೂ ಆಘಾತವನ್ನೂ ಉಂಟುಮಾಡಿತು. ಅದಕ್ಕೂ ಕಾರಣವಿತ್ತು . ‘ಸಿಂಹಾದ್ರಿಯ ಸಿಂಹ’ದ ನಂತರ ನಾರಾಯಣ್ ಸಹವಾಸ ಸಾಕು ಅನ್ನುವ ನಿರ್ಧಾರಕ್ಕೆ ವಿಷ್ಣು ಅವರು ಬಂದಿದ್ದರಂತೆ. ಆದರೆ ಸಂಬಂಧ ಕಡಿದುಕೊಳ್ಳುವ ಮುನ್ನ ಸಣ್ಣದೊಂದು ಪಾಠ ಕಲಿಸಬೇಕು ಎನ್ನುವ ಮಹದಾಸೆ ಅವರಿಗಿತ್ತಂತೆ. ಅದರ ವಾಸನೆಯನ್ನು ಮೊದಲೇ ಗ್ರಹಿಸಿದ ನಾರಾಯಣ್, ಅಡ್ವಾನ್ಸ್ ಆಗಿಯೇ ಬೇಲ್ ತೆಗೆದುಕೊಂಡಿದ್ದಾರೆ.
ಆ ಆಘಾತದಿಂದ ನಿರ್ಮಾಪಕ ವೈಜಾಗ್ ರಾಜ್ ಮಕಾಡೆ ಮಲಗಿದ್ದರೆ, ರೆಹಮಾನ್ ಆದಿಯಾಗಿ ಮಿಕ್ಕವರು ವಿಷ್ಣು ಹಿಂದೆ ಇಲಿಗಳಂತೆ ಓಡಾಡುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್