Don't Miss!
- News ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ, ಕಾರಣ ಏನು?
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿಗರೆ ಕಂಗಳ ಐಂದ್ರಿತಾ ರೇ ತಮಿಳು ಚಿತ್ರದ ಕನಸು ಭಗ್ನ
ಕನ್ನಡ ಚಿತ್ರರಂಗದಲ್ಲಿ ಹೆಸರು, ಹಣ ಮಾಡಿದ ಮೇಲೆ ಚಿಗರೆ ಕಂಗಳ ಚೆಲುವೆ ಐಂದ್ರಿತಾ ರೇ ತಮಿಳು ಚಿತ್ರರಂಗದ ಬಾಗಿಲನ್ನು ಮೆಲ್ಲಗೆ ತಟ್ಟಿದ್ದರು. ಆದರೆ ಪ್ರಥಮ ಪ್ರಯತ್ನದಲ್ಲೆ ಆಕೆಯ ಕನಸು ನುಚ್ಚು ನೂರಾಗಿದೆ. ನಕುಲ್ ಮುಖ್ಯಭೂಮಿಕೆಯಲ್ಲಿರುವ ತಮಿಳು ಚಿತ್ರದ ಮೂಲಕ ಇನ್ನೇನು ಐಂದ್ರಿತಾ ಪದಾರ್ಪಣೆ ಮೂರೇ ಗೇಣು ಅಂತರದಲ್ಲಿತ್ತು.
ಆದರೆ ಚಿತ್ರದ ನಿರ್ದೇಶಕ ಜಾನ್ ಮಹೇಂದ್ರನ್ ಸ್ಪಷ್ಟವಾದ ಕಾರಣ ನೀಡದೆ ತಮ್ಮ ಚಿತ್ರದಿಂದ ಐಂದ್ರಿತಾರನ್ನು ಕೈಬಿಟ್ಟಿದ್ದಾರೆ. ಫೋಟೋ ಶೂಟ್ ಹಾಗೂ ಕೆಲದಿನಗಳ ಚಿತ್ರೀಕರಣವೂ ನಡೆಸಿದ್ದರು ಜಾನ್. ಬಳಿಕ ಏನಾಯಿತೋ ಏನೋ "ತಮ್ಮ ಚಿತ್ರಕ್ಕೆ ಐಂದ್ರಿತಾ ನಾಲಾಯಕ್ ಹಾಗೂ ಪರಿಣಾಮಕಾರಿಯಾಗಿಲ್ಲ " ಎಂದು ಕಾರಣ ನೀಡಿ ಆಕೆಗೆ ಗೇಟ್ ಪಾಸ್ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಐಂದ್ರಿತಾ, "ಜಾನ್ ಅವರು ದಕ್ಷ ನಿರ್ದೇಶಕ ಅನ್ನಿಸಿಕೊಳ್ಳುವುದಿಲ್ಲ. ಅವರಿಗೆ ಡೇಟ್ಸ್ ಕೊಟ್ಟಿದ್ದೆ. ಕೆಲದಿನಗಳ ಚಿತ್ರೀಕರಣವೂ ನಡೆದಿತ್ತ್ತು. ನಿಮ್ಮ ಕೆಲಸ ಹಿಡಿಸಿದೆ ಎಂದು ಸಂದೇಶವನ್ನೂ ರವಾನಿಸಿದ್ದರು. ಕನ್ನಡದಲ್ಲಿ 10ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾನು ಅಭಿನಯಿಸಿದ್ದೇನೆ. ಜಾನ್ ಅವರು ಕೇವಲ ಒಂದೇ ಒಂದು ಚಿತ್ರವನ್ನು ನಿರ್ದೇಶಿಸಿದ್ದಾರೆ. ಅದೂ ಫ್ಲಾಪ್ ಸಿನಿಮಾ" ಎಂದು ತಮ್ಮ ಸಿಟ್ಟನ್ನು ತೋಡಿಕೊಂಡಿದ್ದಾರೆ.