Don't Miss!
- Sports DC vs GT IPL 2024: ಅಕ್ಷರ್, ರಿಷಭ್ ಶೈನಿಂಗ್; ಗುಜರಾತ್ ವಿರುದ್ಧ ಡೆಲ್ಲಿ ಜಯಭೇರಿ
- News ದ್ವೇಷ ಉತ್ತೇಜಿಸುವ ಪೋಸ್ಟ್: ಕರ್ನಾಟಕ ಬಿಜೆಪಿ ವಿರುದ್ಧ ದೂರು ದಾಖಲಿಸಿದ ಚುನಾವಣಾ ಆಯೋಗ
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಪ್ರಿಯಾಂಕ, ಇಂದು ಶ್ರೀದೇವಿ: ಈತನದು ಕೃಷ್ಣಲೀಲೆ !
ಚೆನ್ನೈ: ಹಿಂದೊಮ್ಮೆ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ನಾನು ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗಿರುವೆ ಎಂದು ಹೇಳಿದ ವ್ಯಕ್ತಿ ನೆನಪಿರಬಹುದಲ್ಲವೇ? ಅದೇ ವ್ಯಕ್ತಿ, ಈಗ ಬಾಲಿವುಡ್ ನಟಿ ಶ್ರೀದೇವಿಯನ್ನು ವರಿಸಿದ್ದೆ ಎಂದು ಹೇಳುತ್ತಿದ್ದಾನೆ !
ಈತನ ಹೆಸರು ರಾಮಕೃಷ್ಣ ಗೌಡ. ಈ ಮುನ್ನ ಪ್ರಿಯಾಂಕ ಗಾಂಧಿಯಾಂದಿಗೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರ್ಟು ಮೆಟ್ಟಿಲು ಹತ್ತಿದ್ದ ರಾಮಕೃಷ್ಣ , ಈಗ ನಟಿ ಶ್ರೀದೇವಿಯಾಂದಿಗೆ ಸಂಸಾರ ನಡೆಸಲು ಮುಂದಾಗಿದ್ದಾನೆ. ಶ್ರೀದೇವಿಯಾಂದಿಗೆ ನನ್ನ ಮದುವೆಯಾಗಿತ್ತು . ಕೆಲಕಾಲ ನಾವಿಬ್ಬರೂ ಸಂಸಾರವನ್ನೂ ನಡೆಸಿದ್ದೆವು ಎನ್ನುತ್ತಿದ್ದಾನೆ ಈ ಕೃಷ್ಣ ಪರಮಾತ್ಮ.
ರಾಮಕೃಷ್ಣ ಗೌಡ ಹೇಳುತ್ತಿರುವುದಿಷ್ಟು :
1992ರ ಜನವರಿಯಲ್ಲಿ ಶ್ರೀದೇವಿಯನ್ನು ಮದುವೆಯಾಗಿದ್ದೆ. ಅದೇ ವರ್ಷ ಮಾರ್ಚ್ ತಿಂಗಳವರೆಗೆ ಮಾತ್ರ ಶ್ರೀದೇವಿ ನನ್ನ ಜೊತೆಗಿದ್ದಳು. ಪ್ರಸ್ತುತ ನನ್ನೊಟ್ಟಿಗೆ ಶ್ರೀದೇವಿ ಸಂಸಾರ ಮಾಡಲು ನ್ಯಾಯಾಲಯ ಅನುವು ಮಾಡಿಕೊಡಬೇಕು.
ರಾಮಕೃಷ್ಣನ ಅರ್ಜಿಯನ್ನು ಕುಟುಂಬ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ.
ಅದಿರಲಿ, ಈ ರಾಮಕೃಷ್ಣ ಗೌಡನ ಮುಂದಿನ ಹೆಂಡತಿ ಯಾರಿರಬಹುದು? ಶಿವಶಿವಾ, ಒಂದು ಸಾಲದೆಂದು ಹೆಸರಿನಲ್ಲಿ ಇಬ್ಬರು ದೇವರ ಹೆಸರನ್ನು ಹೊಂದಿರುವ ಈತನದು ಅದೆಂಥ ಲೀಲೆಯಯ್ಯಾ !?
(ಪಿಟಿಐ)
ಮುಖಪುಟ / ಸ್ಯಾಂಡಲ್ವುಡ್