twitter
    For Quick Alerts
    ALLOW NOTIFICATIONS  
    For Daily Alerts

    ಅಂದು ಪ್ರಿಯಾಂಕ, ಇಂದು ಶ್ರೀದೇವಿ: ಈತನದು ಕೃಷ್ಣಲೀಲೆ !

    By Staff
    |

    ಚೆನ್ನೈ: ಹಿಂದೊಮ್ಮೆ ದೆಹಲಿಯ ಉಚ್ಛ ನ್ಯಾಯಾಲಯದಲ್ಲಿ ನಾನು ಪ್ರಿಯಾಂಕಾ ಗಾಂಧಿಯನ್ನು ಮದುವೆಯಾಗಿರುವೆ ಎಂದು ಹೇಳಿದ ವ್ಯಕ್ತಿ ನೆನಪಿರಬಹುದಲ್ಲವೇ? ಅದೇ ವ್ಯಕ್ತಿ, ಈಗ ಬಾಲಿವುಡ್‌ ನಟಿ ಶ್ರೀದೇವಿಯನ್ನು ವರಿಸಿದ್ದೆ ಎಂದು ಹೇಳುತ್ತಿದ್ದಾನೆ !

    ಈತನ ಹೆಸರು ರಾಮಕೃಷ್ಣ ಗೌಡ. ಈ ಮುನ್ನ ಪ್ರಿಯಾಂಕ ಗಾಂಧಿಯಾಂದಿಗೆ ಸಂಸಾರ ಮಾಡಲು ಅವಕಾಶ ಮಾಡಿಕೊಡಿ ಎಂದು ಕೋರ್ಟು ಮೆಟ್ಟಿಲು ಹತ್ತಿದ್ದ ರಾಮಕೃಷ್ಣ , ಈಗ ನಟಿ ಶ್ರೀದೇವಿಯಾಂದಿಗೆ ಸಂಸಾರ ನಡೆಸಲು ಮುಂದಾಗಿದ್ದಾನೆ. ಶ್ರೀದೇವಿಯಾಂದಿಗೆ ನನ್ನ ಮದುವೆಯಾಗಿತ್ತು . ಕೆಲಕಾಲ ನಾವಿಬ್ಬರೂ ಸಂಸಾರವನ್ನೂ ನಡೆಸಿದ್ದೆವು ಎನ್ನುತ್ತಿದ್ದಾನೆ ಈ ಕೃಷ್ಣ ಪರಮಾತ್ಮ.

    ರಾಮಕೃಷ್ಣ ಗೌಡ ಹೇಳುತ್ತಿರುವುದಿಷ್ಟು :

    1992ರ ಜನವರಿಯಲ್ಲಿ ಶ್ರೀದೇವಿಯನ್ನು ಮದುವೆಯಾಗಿದ್ದೆ. ಅದೇ ವರ್ಷ ಮಾರ್ಚ್‌ ತಿಂಗಳವರೆಗೆ ಮಾತ್ರ ಶ್ರೀದೇವಿ ನನ್ನ ಜೊತೆಗಿದ್ದಳು. ಪ್ರಸ್ತುತ ನನ್ನೊಟ್ಟಿಗೆ ಶ್ರೀದೇವಿ ಸಂಸಾರ ಮಾಡಲು ನ್ಯಾಯಾಲಯ ಅನುವು ಮಾಡಿಕೊಡಬೇಕು.

    ರಾಮಕೃಷ್ಣನ ಅರ್ಜಿಯನ್ನು ಕುಟುಂಬ ನ್ಯಾಯಾಲಯ ವಿಚಾರಣೆಗೆ ಸ್ವೀಕರಿಸಿದೆ.

    ಅದಿರಲಿ, ಈ ರಾಮಕೃಷ್ಣ ಗೌಡನ ಮುಂದಿನ ಹೆಂಡತಿ ಯಾರಿರಬಹುದು? ಶಿವಶಿವಾ, ಒಂದು ಸಾಲದೆಂದು ಹೆಸರಿನಲ್ಲಿ ಇಬ್ಬರು ದೇವರ ಹೆಸರನ್ನು ಹೊಂದಿರುವ ಈತನದು ಅದೆಂಥ ಲೀಲೆಯಯ್ಯಾ !?

    (ಪಿಟಿಐ)

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 25, 2024, 5:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X