Don't Miss!
- Sports IPL 2024: ಚಿನ್ನಸ್ವಾಮಿಯಲ್ಲಿ ಡಾಗ್ ಔಟ್ ವಲಯ ನಿರ್ಮಾಣ? ಇದರ ಲಾಭವೇನು?
- News ವಸೂಲಿ ಟೈಟಾನ್ಸ್, ಇಂಪ್ಯಾಕ್ಟ್ ಪ್ಲೇಯರ್ ಇ.ಡಿ; ಮೋದಿ, ಬಿಜೆಪಿಯನ್ನು ಅಣಕಿಸಿದ ಮಹಿಳಾ ಕ್ರಿಕೆಟರ್
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಕಾಂಗಿ ಜೊತೆಗಾರ! ಹರೇ ರಾಮ!
ಮುಸುಕಿನೊಳಗಣ ಗುದ್ದಾಟದ ಬಿಸಿ ಭಾನುವಾರ ನಡೆದ ಅಶ್ವಿನಿ ರಾಮ್ಪ್ರಸಾದ್ರ ಜೊತೆಗಾರ ಸಿನಿಮಾದ ಸುದ್ದಿಗೋಷ್ಠಿ ಮೇಲೆ ಪರಿಣಾಮ ಬೀರಿತ್ತು. ಜೊತೆಗಾರನ ಐಟಂಸಾಂಗ್ಗೆ ಕುಣಿಯಲಿಕ್ಕೆ ಸದ್ಯದಲ್ಲೇ ಯಾನಾ ಗುಪ್ತಾ ಸದ್ಯದಲ್ಲೇ ಬೆಂಗಳೂರಿಗೆ ಬರಲಿದ್ದಾಳೆ. ಯಾನಾ ಸಮಾಚಾರ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳನ್ನು ಹೇಳಿಕೊಳ್ಳುವ ಉಮೇದಿನಿಂದ ರಾಮ್ಪ್ರಸಾದ್ ಬಳಗ ಸುದ್ದಿಗೋಷ್ಠಿಗೆ ಬಂದರೆ ಅಲ್ಲಿದ್ದುದು ಮೂರು ಮತ್ತೊಬ್ಬರು ಮಾತ್ರ!
ಜೊತೆಗಾರ ಸುದ್ದಿಗೋಷ್ಠಿಗೆ ಪತ್ರಕರ್ತರ ಗೈರುಹಾಜರಿಯ ವಾಸನೆ ಪ್ರಚಾರಕರ್ತ ನಾಗೇಂದ್ರ ಅವರಿಗೆ ಮೊದಲೇ ಬಡಿದಂತಿತ್ತು. ಚಿತ್ರೋದ್ಯಮದಲ್ಲಿನ ಅನಾರೋಗ್ಯಕರ ಬೆಳವಣಿಗೆಯಿಂದ ರೋಸಿಹೋದ ಅವರು ತಮ್ಮ ಆಪ್ತರೊಡನೆ ಅಸಮಾಧಾನ ತೋಡಿಕೊಂಡಿದ್ದಾರೆ.
ಇಪ್ಪತ್ತೈದು ವರ್ಷಗಳಿಂದ ಉದ್ಯಮದಲ್ಲಿದ್ದೇನೆ. ನಾನು ಆಯೋಜಿಸುವ ಸುದ್ದಿಗೋಷ್ಠಿ ಖಾಲಿ ಇರುತ್ತದೆಂದರೆ ನಾನೇಕೆ ಈ ವೃತ್ತಿಯಲ್ಲಿರಬೇಕು? ಪ್ರೂಫ್ರೀಡರ್ ಕೆಲಸಕ್ಕೆ ಎಲ್ಲಿಯಾದರು ಸೇರಿಕೊಳ್ಳುವುದು ಒಳ್ಳೆಯದು ಎನ್ನುವ ಅರ್ಥದ ಮಾತುಗಳನ್ನು ಪಿಆರ್ಒ ನಾಗೇಂದ್ರ ಆಡಿದ್ದಾರೆ.
ಸದ್ಯಕ್ಕಂತೂ ಯಾವ ಕನ್ನಡ ಸಿನಿಮಾ ಕೂಡ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಿಲ್ಲ. ಗಾಂಧಿನಗರದಲ್ಲೇನಿದ್ದರೂ ವಿವಾದ-ಮುನಿಸುಗಳದೇ ಗದ್ದಲ.