Don't Miss!
- News ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ & ನೆಲಮಂಗಲ ಹೊಸ ಉಪನಗರ: ಡಾ. ಕೆ. ಸುಧಾಕರ್ ಭರವಸೆ!
- Finance ಜಗತ್ತಿನಾದ್ಯಂತ 6,000 ಉದ್ಯೋಗಿಗಳನ್ನು ವಜಾ ಮಾಡಿದ ಡೆಲ್
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಭಿ ಬೇಬಿಗೆ ಕನ್ನಡ ಕಲಿಸಿದ ದೀಪಿಕಾ!
ಇಂಥ ಕನ್ನಡ ಪದಗಳನ್ನು ಉಲಿದಿದ್ದು, ಮಂಗಳೂರು ಬೆಡಗಿ ಐಶ್ವರ್ಯ ರೈ ಬಚ್ಚನ್ ಅವರ ಪಾಣಿಗ್ರಹಣ ಮಾಡಿರುವ ಅಭಿಷೇಕ್ ಬಚ್ಚನ್. ಇದಕ್ಕಾಗಿಯೂ ಸಂತಸಪಡೋಣ. ಇಷ್ಟಾದರೂ ಮಾತಾಡಲು ಪ್ರಯತ್ನಪಟ್ಟನಲ್ಲ ಅಂತ.
ಆದರೆ, ವಿಪರ್ಯಾಸದ ಸಂಗತಿಯೆಂದರೆ, ಈ ಕನ್ನಡ ನುಡಿಮುತ್ತುಗಳನ್ನು ಕಲಿಸಿಕೊಟ್ಟದ್ದು ಕನ್ನಡ ನಾಡಿನ ಕುವರಿ, ಬಾಲಿವುಡ್ ಚಿತ್ರರಂಗದಲ್ಲಿ ಬೆಳಗುತ್ತಿರುವ ಉದಯೋನ್ಮುಖ ತಾರೆ ದೀಪಿಕಾ ಪಡುಕೋಣೆ. ಅವಳು ಈ ಮಾತುಗಳನ್ನು ಹೇಳಿಸಿಕೊಟ್ಟಿದ್ದಕ್ಕೆ ರೇಗಬೇಕಾ ಅಥವಾ ತಪ್ಪುತಪ್ಪಾಗಿದ್ದರೂ ಕೂಡ ಕೊನೆಗೂ ಕೆಲ ಕನ್ನಡ ಪದಗಳನ್ನು ಮಾತಾಡಿದಳಲ್ಲ ಎಂದು ಬೀಗಬೇಕಾ ಹೇಳಿ?
ಟಿವಿಯಲ್ಲಿ ರಿಯಾಲಿಟಿ ಶೋನಲ್ಲಿ ಕಾರ್ತಿಕ್ ಕಾಲಿಂಗ್ ಕಾರ್ತಿಕ್ ಹಿಂದಿ ಚಿತ್ರದ ಜೋಡಿ ದೀಪಿಕಾ ಪಡುಕೋಣೆ ಮತ್ತು ಫರ್ಹಾನ್ ಅಖ್ತರ್ ಅವರು ಭಾಗವಹಿಸಿದಾಗ ಈ ಮಾತುಗಳನ್ನು ದೀಪಿಕಾ ಅಭಿಷೇಕ್ ಅವರಿಗೆ ಕಲಿಸಿಕೊಟ್ಟಿದ್ದಾರೆ. ಓಂ ಶಾಂತಿ ಓಂ ಚಿತ್ರ ನಿಮ್ಮ ಮೊದಲ ಚಿತ್ರವಲ್ಲ ಎಂದು ಅಭಿಷೇಕ್ ದೀಪಿಕಾಳನ್ನು ಕೆಣಕಿದಾಗ, ಅದನ್ನು ಹಿಂಜರಿಯುತ್ತಲೇ ದೀಪಿಕಾ ಒಪ್ಪಿಕೊಂಡಳು.
ಕನ್ನಡ ನಾಡಿನಲ್ಲೇ ಹುಟ್ಟಿ ಬೆಳೆದು ಬೇರೆಲ್ಲೋ ವೃತ್ತಿಯನ್ನು ಅರಸಿ ಹೋದ ಈ ನಟನಾಮಣಿಗಳು ಕನ್ನಡದ ನಾಲ್ಕು ನುಡಿಗಳನ್ನು ಸ್ಪಷ್ಟವಾಗಿ ಮಾತಾಡಲು ತಿಣುಕುವುದು ನಿಜಕ್ಕೂ ವಿಪರ್ಯಾಸದ ಸಂಗತಿ. ಇಲ್ಲೇ ಹುಟ್ಟಿ, ಇಲ್ಲೇ ನೆಲೆ ಕಂಡುಕೊಂಡ ನಮ್ಮವರೇ ಆದ ಅನೇಕ ನಟಿಯರಿಗೆ ಸರಿಯಾಗಿ ಈಗಲೂ ಕೂಡ ಕನ್ನಡ ಮಾತಾಡಲು ಬರುವುದಿಲ್ಲ ಎಂಬುದು ಎಲ್ಲರೂ ಒಪ್ಪತಕ್ಕ ಮಾತು.
ಹೊರನಾಡಿನಿಂದ ಬಂದ ಪೂಜಾ ಗಾಂಧಿ, ಪಾರ್ವತಿ, ಬಿಯಾಂಕಾ ದೇಸಾಯಿ, ಪ್ರಿಯಾಂಕಾ ಉಪೇಂದ್ರ ಮೊದಲಾದವರು ಇಲ್ಲಿನವರೇ ಎಂಬಂತೆ ಕನ್ನಡ ಮಾತಾಡುತ್ತಿದ್ದಾರೆ. ಹಿಂದೆ ಕೂಡ ಮಾಲಾಶ್ರೀ, ಜೂಲಿ ಲಕ್ಷ್ಮಿ, ಸುಹಾಸಿನಿ, ಸರಿತಾ ಮೊದಲಾದವರು ನಿರರ್ಗಳವಾಗಿ ಕನ್ನಡ ಮಾತಾಡುವುದನ್ನು ಕಲಿತಿದ್ದಾರೆ. ಆದರೆ, ಇಂದಿನ ಕಾಲದ ಹುಡುಗಿಯರಿಗೇನಾಗಿದೆ? ಕನ್ನಡ ನಾಡಿನ ಭಾಷಾ ಸೊಗಡನ್ನು ಯಾಕೆ ಮರೆಯುತ್ತಿದ್ದಾರೆ?