ಫಾರ್ಮ್ಗೆ ಮತ್ತೆ ಮರಳಿದ ನಟಿ ನಿಖಿತಾ ತುಕ್ರಲ್
ನಟ ದರ್ಶನ್ ಗಲಾಟೆ ಮುಗಿದಿದೆ. ಈಗ ಎಲ್ಲವೂ ನಿರಾಳ. ದರ್ಶನ್ ಗಲಾಟೆಯಲ್ಲಿ ನಟಿ ನಿಖಿತಾ ಹೆಸರೂ ಧಾರಾಳವಾಗಿ ಕೇಳಿಬಂದಿತ್ತು. ಬಳಿಕ ನಿಖಿತಾ ಕೂಡ ಸೈಲೆಂಟಾಗಿ ಗಪ್ಚಿಪ್ ಆದರು. ಈಗ ಮತ್ತೆ ಫಾರ್ಮ್ಗೆ ಮರಳಿದ್ದಾರೆ.
ದರ್ಶನ್ ಗಲಾಟೆಯ ಪುಣ್ಯದ ಫಲವೋ ಏನೋ ಈಗ ನಿಖಿತಾಗೆ ಅವಕಾಶಗಳ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿವೆಯಂತೆ. ನಿಖಿತಾ ಕಾಲ್ಶೀಟ್ಗಾಗಿ ನಿರ್ಮಾಪಕರು ಮುಗಿಬಿದ್ದಿದ್ದಾರಂತೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಚಿತ್ರೀಕರಣಕ್ಕೆ ಬೆಳಗಾವಿಗೆ ಡಿಸೆಂಬರ್ 20ಕ್ಕೆ ನಿಖಿತಾ ಬರಲಿದ್ದಾರೆ.
ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಿಂದಲೂ ನಿಖಿತಾಗೆ ಆಫರ್ಗಳ ಸುರಿಮಳೆಯಾಗುತ್ತಿದೆ. ಈಗಾಗಲೆ ಕನ್ನಡದ ಕೆಲವು ಚಿತ್ರಗಳಿಗೆ ಓಕೆ ಎಂದಿದ್ದು ಶೀಘ್ರದಲ್ಲೆ ಚಿತ್ರದ ವಿವರಗಳು ಹೊರಬೀಳಲಿವೆ. ನಿಖಿತಾ ಮೇಲೆ ನಿಷೇಧ ಹೇರಿದ್ದ ನಿರ್ಮಾಪಕರ ಸಂಘದ ಕೆಲವರು ಆಕೆಯನ್ನು ಸಂಪರ್ಕಿಸಿದ್ದಾರಂತೆ.
ಕೆಲವರೇನೋ ಐಟಂ ಡಾನ್ಸ್ ಮಾಡ್ತೀಯಾ ಅಂದರಂತೆ. ಮತ್ತೆ ಕೆಲವರು ಹೀರೋಯಿನ್ ರೋಲ್ ಎಂದರಂತೆ. ಐಟಂ ಪಾತ್ರಗಳಲ್ಲೆಲ್ಲಾ ತಾನು ಅಭಿನಯಿಸಲ್ಲ ಎಂದಿರುವ ನಿಖಿತಾ, ಹೀರೋಯಿನ್ ಪಾತ್ರಕ್ಕೆ ಭಾರಿ ಸಂಭಾವನೆ ಕೇಳಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications











